ಸುಳ್ಯ: ಕೋರ್ಟ್ ನಲ್ಲಿ ಡಿಕೆಶಿ ಸಾಕ್ಷ್ಯಹೇಳುವಾಗ ಕೈ ಕೊಟ್ಟ ಕರೆಂಟ್ !

Prasthutha|

ಮಂಗಳೂರು: ಆರು ವರ್ಷಗಳ ಹಿಂದೆ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಾಕ್ಷ್ಯ ಹೇಳುತ್ತಿದ್ದ ಸಂದರ್ಭದಲ್ಲಿ ಕರೆಂಟ್ ಕೈಕೊಟ್ಟ ಪ್ರಸಂಗ ಇಂದು ನಡೆದಿದೆ.

- Advertisement -


ಸುಳ್ಯದ ಜನ ವಿದ್ಯುತ್ ವ್ಯತ್ಯಯವಾಗುವ ಸಮಸ್ಯೆ ಆಗಾಗ ಎದುರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇಂದು ಮಾಜಿ ಪವರ್ ಮಿನಿಸ್ಟರ್ ಕೋರ್ಟ್ ಕಟೆಕಟೆಯ್ಲಲಿರುವಾಗಲೇ ಕರೆಂಟ್ ಹೋಗಿದೆ.


ವಿದ್ಯುತ್ ಸಚಿವರಾಗಿದ್ದ ಸಂದರ್ಭದಲ್ಲಿ ನಿಮಗೆ ಆರೋಪಿ ಗಿರಿಧರ್ ರೈ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿರೋದು ತಪ್ಪು. ಆದರೆ ಸುಳ್ಯ ದಲ್ಲಿ ಅಷ್ಟೊಂದು ವಿದ್ಯುತ್ ಸಮಸ್ಯೆ ಇದೆ. ಜನ ಪ್ರತಿನಿತ್ಯ ಲೋಡ್ ಶೆಡ್ಡಿಂಗ್ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಈಗ ಸ್ವತಃ ನೀವೇ ಅನುಭವ ಮಾಡಿದ್ದೀರಿ. ಅಂತಾ ನ್ಯಾಯಾಧೀಶರು ಡಿ. ಕೆ. ಶಿವಕುಮಾರ್ಗೆ ಪರಿಸ್ಥಿತಿ ಮನವರಿಕೆ ಮಾಡಿದ್ದಾರೆ.

Join Whatsapp