ಲಖಿಂಪುರ ದುರ್ಘಟನೆ ಎಂತಹ ಹೃದಯವನ್ನೂ ತಲ್ಲಣಗೊಳಿಸದೆ ಇರದು: ಸಂಸದ ವರುಣ್ ಗಾಂಧಿ

Prasthutha|

ನವದೆಹಲಿ: ಉತ್ತರಪ್ರದೇಶದ ಲಖಿಂಪುರದಲ್ಲಿ ರೈತರ ಹತ್ಯೆಯ ಕುರಿತು ವೈರಲ್ ಆದ ವೀಡಿಯೋ ಎಂತಹ ಆತ್ಮವನ್ನೂ ತಲ್ಲಣಗೊಳಿಸದೆ ಇರದು ಎಂದು ಬಿಜೆಪಿ ನಾಯಕ, ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

- Advertisement -

ಮಾತ್ರವಲ್ಲ 8 ಮಂದಿಯನ್ನು ಹತ್ಯೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ ಹತ್ಯೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಎಂತಹ ಆತ್ಮವನ್ನೂ ತಲ್ಲಣಗೊಳಿಸದೆ ಇರದು ಎಂದು ಅವರು ಪ್ರತಿಕ್ರಿಯಿಸಿದರು.

- Advertisement -

ಲಖಿಂಪುರ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ವರುಣ್ ಗಾಂಧಿ, ಸುಪ್ರೀಮ್ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Join Whatsapp