ರಾಯ್ ಬರೇಲಿ ಬಿಜೆಪಿ ಟಿಕೆಟ್ ಆಫರ್ ತಿರಸ್ಕರಿಸಿದ ವರುಣ್ ಗಾಂಧಿ

Prasthutha|

ನವದೆಹಲಿ: ಉತ್ತರಪ್ರದೇಶದಲ್ಲಿ ಬಾಕಿ ಉಳಿದಿರುವ ಏಕೈಕ ಕಾಂಗ್ರೆಸ್ ಭದ್ರಕೋಟೆ ಒಂದೆನಿಸಿದ ರಾಯ್ ಬರೇಲಿಯಲ್ಲಿ ಸ್ಪರ್ಧಿಸಲು ಬಿಜೆಪಿ ಕೊಟ್ಟಿರುವ ಟಿಕೆಟ್ ಆಫರ್ ಅನ್ನು ವರುಣ್ ಗಾಂಧಿ ತಿರಸ್ಕರಿಸಿದ್ದಾರೆ.

- Advertisement -


ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದೇ ಕುಟುಂಬಕ್ಕೆ ಸೇರಿದ ವರುಣ್ ಗಾಂಧಿಯನ್ನು ಕಣಕ್ಕಿಳಿಸಿ ರಾಯ್ ಬರೇಲಿಯನ್ನು ವಶಕ್ಕೆ ಪಡೆಯುವ ಪ್ಲಾನ್ ಬಿಜೆಪಿಯದ್ದಾಗಿದೆ. ವಾರದ ಹಿಂದೆಯೇ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ಆಫರ್ ಕೊಟ್ಟಿತ್ತು. ಅಂತಿಮವಾಗಿ ವರುಣ್ ಗಾಂಧಿ ಈ ಆಫರ್ ಅನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ ರಾಯ್ ಬರೇಲಿಯಿಂದ ತಾನು ಸ್ಪರ್ಧಿಸಿದರೆ ಕೌಟುಂಬಿಕ ಕಲಹದಂತಾಗುತ್ತದೆ. ಈ ರಾಡಿಯೇ ಬೇಡ ಎಂದು ವರುಣ್ ಗಾಂಧಿ ಈ ಕ್ಷೇತ್ರದ ಟಿಕೆಟ್ ನಿರಾಕರಿಸಲು ಕಾರಣ ಎನ್ನಲಾಗಿದೆ

Join Whatsapp