ಎಸ್.ಡಿ.ಪಿ.ಐ ಮಂಜನಾಡಿ ಗ್ರಾಮ ಸಮಿತಿ ವತಿಯಿಂದ ಕಲ್ಕಟ್ಟದಲ್ಲಿ ಗಣರಾಜ್ಯೋತ್ಸವ ಆಚರಣೆ

Prasthutha|

ಮಂಗಳೂರು: “ಗಣರಾಜ್ಯದ ಸಂರಕ್ಷಕರಾಗೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಗಣರಾಜ್ಯ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಸಂದೇಶ ಕಾರ್ಯಕ್ರಮವು ಎಸ್.ಡಿ.ಪಿ.ಐ ಮಂಜನಾಡಿ ಗ್ರಾಮ ಸಮಿತಿಯ ವತಿಯಿಂದ ಕಲ್ಕಟ್ಟದಲ್ಲಿ ನಡೆಯಿತು.

- Advertisement -

ಜನಾಬ್: ಹಸನ್ ಕುಂಙಿ (ಅಧ್ಯಕ್ಷರು ಎಸ್.ಡಿ.ಪಿ.ಐ ಮಂಜನಾಡಿ ಗ್ರಾಮ ಸಮಿತಿ) ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಜನಾಬ್: ನೌಶಾದ್ ಕಲ್ಕಟ್ಟ (ಸದಸ್ಯರು, ಮಂಜನಾಡಿ ಗ್ರಾಮ ಪಂಚಾಯತ್) ಧ್ವಜಾರೋಹಣ ನಡೆಸಿ ಸಂದೇಶ ಭಾಷಣವನ್ನು ಮಾಡಿದರು .

ಕಾರ್ಯಕ್ರಮದಲ್ಲಿ ಹಿರಿಯರಾದ ಹುಸೇನಾಕ ಕಲ್ಕಟ್ಟ ಹಾಗೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

- Advertisement -

ಕಾರ್ಯಕ್ರಮವನ್ನು ಅಶ್ರಫ್ ಕಲ್ಕಟ್ಟ ಸ್ವಾಗತಿಸಿ ನಿರೂಪಿಸಿದರು.

Join Whatsapp