ಮೊಮ್ಮಗನ ಪೆನ್‌ಡ್ರೈವ್‌ ಪ್ರಕರಣದಿಂದ ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು

Prasthutha|

ಶಿವಮೊಗ್ಗ: ದೇವೇಗೌಡರು ಸುದೀರ್ಘ‌ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರ ಹಿರಿತನಕ್ಕೆ ಗೌರವವೂ ಇದೆ. ದೇವೇಗೌಡರು ನಮಗೂ ನಾಯಕರು. ಅವರ ಮೊಮ್ಮಗನ ಪೆನ್‌ಡ್ರೈವ್‌ ಪ್ರಕರಣದಿಂದ ಅವರಿಗೆ ನೋವು, ಆತಂಕವಾಗಿದ್ದರೆ ಏನೂ ಮಾಡಲು ಆಗದು. ಇದು ಯಾರೂ ಖುಷಿಪಡುವ ವಿಚಾರವಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

- Advertisement -

ಪೆನ್‌ಡ್ರೈವ್‌ ತನಿಖೆ ವಿಚಾರದಲ್ಲಿ ಸರಕಾರ ಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದ ಸಚಿವರು, ಇದರಲ್ಲಿ ರಾಜಕೀಯ ಪ್ರಶ್ನೆಯೇ ಇಲ್ಲ. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದರು.

ಡಿ.ಕೆ.ಶಿವಕುಮಾರ್‌ ಕೂಡ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದೂ ತಿಳಿಸಿದರು. ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾಗಿದೆ. ಹಾಗಾಗಿ ಮಾಜಿ ಸಚಿವ ರೇವಣ್ಣ ಬಂಧನವಾಗಿದೆ. ಇಂಥ ಘಟನೆ ಬೇರೆ ಪಕ್ಷದಲ್ಲಿ ನಡೆದಿದ್ದರೆ ಅಮಿತ್‌ ಶಾ, ಬಿಜೆಪಿ ನಾಯಕರು ಎಷ್ಟು ಮಾತನಾಡುತ್ತಿದ್ದರು ಎಂದು ಪ್ರಶ್ನಿಸಿದರು.

Join Whatsapp