ಕೊಡಗು: ಪ್ರೇಮ‌ ಪ್ರಕರಣದಲ್ಲಿ ಇಬ್ಬರಿಗೆ ಚಾಕು ಇರಿದ ಯುವಕ

Prasthutha|

ಮಡಿಕೇರಿ: ಪ್ರೇಮ ಪ್ರಕರಣದಲ್ಲಿ ಘರ್ಷಣೆ ಏರ್ಪಟ್ಟು ಯುವಕನೋರ್ವ ಪ್ರೇಯಸಿ ಹಾಗೂ ಜೊತೆಗಿದ್ದ ಮತ್ತೊಬ್ಬನಿಗೆ ಚಾಕು ಇರಿದ ಘಟನೆ ಕುಶಾಲನಗರದ ಪ್ರವಾಸಿ ತಾಣವಾದ ಕಾವೇರಿ‌ ನಿಸರ್ಗಧಾಮದಲ್ಲಿ‌ ನಡೆದಿದೆ.

- Advertisement -

ಗಾಯಗೊಳಗಾದವರು ಇಬ್ಬರು ಸ್ಥಳೀಯ ಸರಕಾರಿ‌ ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದೆ. ಚಾಕು ಇರಿದ ಯುವಕ‌ ಕುಶಾಲನಗರದ ಹೋಟೆಲ್ ಸಪ್ಲೆಯರ್ ಎಂದು ತಿಳಿದುಬಂದಿದೆ. ಕುಶಾಲನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp