ಸ್ಮಶಾನದಲ್ಲಿ ಮಧ್ಯರಾತ್ರಿ ಹುಟ್ಟುಹಬ್ಬ ಆಚರಿಸಿಕೊಂಡ ಚಿಂತಕ !

Prasthutha|

ಮುಂಬೈ: ಖ್ಯಾತ ಚಿಂತಕ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣದ ಗೌತಮ ಮೋರೆ ಅವರು ತಮ್ಮ 54ನೇ ಹುಟ್ಟು ಹಬ್ಬವನ್ನು ಕಲ್ಯಾಣದ ಸ್ಮಶಾನದಲ್ಲಿ ಆಚರಿಸಿಕೊಂಡು ಮೂಢನಂಬಿಕೆಗಳಿಗೆ ಸವಾಲು ಹಾಕಿದ್ದಾರೆ.

- Advertisement -

ಮಕ್ಕಳು ಮಹಿಳೆಯರ ಸಹಿತ 100ರಷ್ಟು ಜನ ಮೋರೆಯವರ ಮಿತ್ರರು ಈ ಮಧ್ಯ ರಾತ್ರಿಯ ಸ್ಮಶಾನದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಕೇಕ್ ಮತ್ತು ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು.

ಮಸಣದ ಬಗೆಗಿನ ಭಯ ಮತ್ತು ಮೂಢನಂಬಿಕೆ ದೂರ ಮಾಡಲು ಈ ಪ್ರಯತ್ನ ಮಾಡಲಾಗಿದೆ. ನಮ್ಮ ಊಟವನ್ನು ಗೋರಿಯಿಂದ ಎದ್ದು ಬಂದು ಯಾರೂ ಕಸಿಯಲಿಲ್ಲ ಎಂದು ಮೋರೆ ಹೇಳಿದ್ದಾರೆ.

Join Whatsapp