ಇಂದು ರಾಜ್ಯದಲ್ಲಿ ಮೊದಲನೇ ಹಂತದ ಮತದಾನ: ಬಿರುಸಿನ ಸ್ಪರ್ಧೆ ನೀಡಲಿರುವ 28 ಅಭ್ಯರ್ಥಿಗಳು

Prasthutha|

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

- Advertisement -

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಇಂದು ಮತದಾನ ನಡೆಯುತ್ತಿದೆ.

14 ಕ್ಷೇತ್ರಗಳಲ್ಲಿ ಒಟ್ಟು 2 ಕೋಟಿ 88 ಲಕ್ಷದ 19 ಸಾವಿರದ 342 ಮತದಾರರಿದ್ದು, ಇದರಲ್ಲಿ 1 ಕೋಟಿ 44 ಲಕ್ಷದ 28 ಸಾವಿರದ 99 ಪುರುಷ ಮತದಾರರು. 1 ಕೋಟಿ 43 ಲಕ್ಷದ 88 ಸಾವಿರದ 176 ಮಹಿಳಾ ಮತದಾರರು. 3,067 ತೃತೀಯಲಿಂಗಿಗಳು ಇದ್ದಾರೆ. 30 ಸಾವಿರದ 602 ಮತಗಟ್ಟೆ ತೆರೆಯಲಾಗಿದ್ದು, 4 ಲಕ್ಷ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, 5,000 ಮೈಕ್ರೋ ಅಬ್ಸರ್ವರ್‌ಗಳ ನೇಮಕ ಮಾಡಲಾಗಿದ್ದು, 50,000 ಸಿವಿಲ್ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 65 ಅರೆಸೇನಾ ಪಡೆ ತುಕಡಿ ಹಾಗೂ ಸಶಸ್ತ್ರ ಪೊಲೀಸ್ ಪಡೆಯೂ ಕಣ್ಗಾವಲು ಇರಿಸಲಿದೆ.

- Advertisement -

ಇಂದು ಬಿರುಸಿನ ಸ್ಪರ್ಧೆ ನಡೆಯಲಿರುವ ಅಭ್ಯರ್ಥಿಗಳು

ಉಡುಪಿ: ಚಿಕ್ಕಮಗಳೂರು ಕೋಟಾ ಶ್ರೀನಿವಾಸ ಪೂಜಾರಿ- ಜಯಪ್ರಕಾಶ್ ಹೆಗ್ಡೆ
ಹಾಸನ : ಪ್ರಜ್ವಲ್ ರೇವಣ್ಣ -ಶ್ರೇಯಸ್ ಪಟೇಲ್
ದಕ್ಷಿಣ ಕನ್ನಡ : ಕ್ಯಾ. ಬ್ರಿಜೇಶ್ ಚೌಟ- ಪದ್ಮರಾಜ್ ಆರ್
ಚಿತ್ರದುರ್ಗ: ಗೋವಿಂದ ಕಾರಜೋಳ- ಬಿಎನ್​ ಚಂದ್ರಪ್ಪ
ತುಮಕೂರು: ವಿ ಸೋಮಣ್ಣ- ಮುದ್ದಹನುಮೇಗೌಡ
ಮಂಡ್ಯ: ಎಚ್​ಡಿ ಕುಮಾರಸ್ವಾಮಿ- ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
ಮೈಸೂರು: ಯದುವೀರ್ ಒಡೆಯರ್- ಎಂ ಲಕ್ಷ್ಮಣ್
ಚಾಮರಾಜನಗರ: ಸುಭಾಷ್ ಭೋಸ್- ಎಸ್ ಬಾಲರಾಜ್
ಬೆಂಗಳೂರು ಗ್ರಾಮಾಂತರ: ಡಾ ಸಿಎನ್ ಮಂಜುನಾಥ್- ಡಿಕೆ ಸುರೇಶ್
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ- ಸೌಮ್ಯಾ ರೆಡ್ಡಿ
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ – ಪ್ರೊ. ರಾಜೀವ್ ಗೌಡ
ಬೆಂಗಳೂರು ಕೇಂದ್ರ: ಪಿಸಿ ಮೋಹನ್- ಮನ್ಸೂರ್ ಅಲಿ ಖಾನ್
ಚಿಕ್ಕಬಳ್ಳಾಪುರ: ಡಾ ಕೆ ಸುಧಾಕರ್- ರಕ್ಷಾ ರಾಮಯ್ಯ
ಕೋಲಾರ: ಮಲ್ಲೇಶ್ ಬಾಬು- ಕೆವಿ ಗೌತಮ್

Join Whatsapp