ಪ್ರಚೋದನಕಾರಿ ಸುಳ್ಳು ಸುದ್ದಿ ಟ್ವೀಟ್ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ । ಸಿಕ್ಕಿಬಿದ್ದಾಗ ಟ್ವೀಟ್ ಡಿಲೀಟ್ !

Prasthutha|

ಪ್ರಚೋದನಕಾರಿ ಭಾಷಣ, ಹೇಳಿಕೆಗಳಿಗಾಗಿ ಕುಖ್ಯಾತಿ ಪಡೆದಿರುವ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರು ಮತ್ತೊಮ್ಮೆ ತನ್ನ ಹಳೆ ಚಾಳಿಯಿಂದ ಸುದ್ದಿಯಲ್ಲಿದ್ದಾರೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸುವುದಾಗಿ AIUDF ಪಕ್ಷದ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಯಾವುದೇ ಹಿಂದೂಗಳನ್ನು ಇಲ್ಲಿ ಬಿಡುವುದಿಲ್ಲ ಎಂಬ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಅವರೂ ಅದನ್ನು ಕಾಪಿ ಪೇಸ್ಟ್ ಮಾಡಿ ಟ್ವಿಟರಿನಲ್ಲಿ ಶೇರ್ ಮಾಡಿದ್ದರು. ಆ ಬಳಿಕ ನಕಲಿ ಸುದ್ದಿ ವಿರೋಧಿ ಸಂಸ್ಥೆಯು ಸತ್ಯಾಂಶ ಹೊರಬಿಡುತ್ತಿದ್ದಂತೆ ಶೋಭಾ ತನ್ನ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.

- Advertisement -

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ, ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕಿಂತಲೂ ಹೆಚ್ಚಾಗಿ ಕೋಮು ಉದ್ರೇಕಕಾರಿ ಭಾಷಣ ಮತ್ತು ಶವ ರಾಜಕೀಯಕ್ಕಷ್ಟೇ ತನ್ನನ್ನು ಸೀಮಿತಗೊಳಿಸಿರುವ ಶೋಭಾ ಕರಂದ್ಲಾಜೆ ಮುಸ್ಲಿಮರ ಮೇಲೆ ಹರಿಹಾಯ್ದು ಕೋಮು ಭಾವನೆಯನ್ನು ಕೆರಳಿಸಲು ಪ್ರಯತ್ನಿಸಿ ವಿಫಲರಾಗಿ, ಕೊನೆಯಲ್ಲಿ ತನ್ನ ಟ್ವೀಟ್ ಡಿಲೀಟ್ ಮಾಡಿ ಮತ್ತೊಮ್ಮೆ ಮುಖಭಂಗಕ್ಕೀಡಾಗಿದ್ದಾರೆ.

ತನ್ನದೇ ಕ್ಷೇತ್ರದ ಅಭಿವೃದ್ಧಿಯ ಕುರಿತು ಯೋಚಿಸದ ಸಂಸದೆ ಶೋಭಾ, ದೂರದ ಅಸ್ಸಾಮಿನ ಪಕ್ಷದ ಮುಖಂಡನೊಬ್ಬ ಮಾತಾಡಿದ ವೀಡಿಯೋಗೆ ಸುಳ್ಳು ತಲೆ ಬರಹ ಹಾಕಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿದ್ದಾರೆ. ಈ ಕುರಿತು ಟ್ವಿಟ್ಟರಿನಲ್ಲಿ ಕೂಡಾ ಶೋಭಾ ಅವರ ಬೇಜವಬ್ದಾರಿಯುತ ಟ್ವೀಟ್ ವಿರುದ್ಧ ಟ್ವಿಟ್ಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp