ನನ್ನಂತೆ ಆಸ್ತಿಗಳನ್ನು ಸ್ಕೂಲ್, ಹಾಸ್ಟೆಲ್ ಕಟ್ಟೋಕೆ‌ ಕುಮಾರಸ್ವಾಮಿ ಕೊಟ್ಟಿದ್ದರೆ ತೋರಿಸಲಿ: ಡಿಕೆ ಶಿವಕುಮಾರ್

Prasthutha|

ರಾಮನಗರ: ನಮ್ಮ ಆಸ್ತಿಗಳನ್ನು ಸ್ಕೂಲ್, ಹಾಸ್ಟೆಲ್ ಕಟ್ಟೋಕೆ‌ ಕೊಟ್ಟಿದ್ದೇನೆ. ನಾನು‌ ಮಾಡಿದ ತರಹ ಬಿಜೆಪಿ, ಕುಮಾರಸ್ವಾಮಿ ಮಾಡಿದ್ರೆ ತೋರಿಸಲಿ. ನಾವೀರೋದೆ ಜನರಿಗೋಸ್ಕರ. ಜನಕ್ಕೋಸ್ಕರ ನಾವು ಪ್ರಾಣ ಕೊಡುತ್ತಿದ್ದೇವೆ. ಜನರು ನಮಗೋಸ್ಕರ ಪ್ರಾಣ ಕೊಡುತ್ತಿದ್ದಾರೆ ಎಂದು ಉಪ‌ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ರಾಮನಗರದ ದೊಡ್ಡ ಆಲನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರಿಗೆ ನನ್ನ ಮೇಲೆ ನಂಬಿಕೆ‌ ಇದೆ. ಮೊದಲು‌ ಹೇಗಿತ್ತು, ಈಗ ಹೇಗಿದೆ ಅಂತ ಗೊತ್ತಿದೆ ಎಂದಿದ್ದಾರೆ.

ಡಿ.ಕೆ. ಸುರೇಶ್ ಆಪ್ತರ ಮನೆ‌ ಮೇಲೆ ಐಟಿ‌ ದಾಳಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಐಟಿ ಅಧಿಕಾರಿಗಳು‌ ಕೆಲಸ ಮಾಡಲು‌ ಬಿಡದೆ 2 ದಿನಗಳ‌ ಕಾಲ‌ ತಡೆದಿದ್ದಾರೆ. ಇವತ್ತು ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರ ಮನೆ ಮೇಲೆ‌ ರೈಡ್ ಮಾಡಿದ್ದಾರೆ. ಅವರು ನಮ್ಮ‌ಮೇಲೆ‌ ಕೆಟ್ಟ ಹೆಸರು ತರೋಕೆ ಮಾಡುತ್ತಿದ್ದಾರೆ. ಯಾರಾದರೂ‌ ಬಿಜೆಪಿ‌ಯವರ ಮೇಲೆ‌ ದಾಳಿ‌ ಆಗಿದ್ದೀಯಾ? ಬಿಜೆಪಿ, ದಳದವರು ದುಡ್ಡು ಹಂಚುತ್ತಿಲ್ವಾ? ಎಲ್ಲಾ ಕಡೆ ದುಡ್ಡು ಹಂಚುತ್ತಿದ್ದಾರೆ. ಕೇವಲ‌ ನಮ್ಮನ್ನ ಮಾತ್ರ ಟಾರ್ಗೆ ಮಾಡುತ್ತಿದ್ದಾರೆ. ಮಂಡ್ಯ ಹಾಸನದಲ್ಲಿ ವೋಟ್ ಮೇಲೆ ದುಡ್ಡು ಕೊಡುತ್ತಿದ್ದಾರೆ. ಇನ್‌ಕಮ್ ಟ್ಯಾಕ್ಸ್‌ನವರು ಕಣ್ಣು ಮುಚ್ವಿಕೊಂಡು ಕುಳಿತ್ತಿದ್ದಾರಾ ಎಂದು ಪ್ರಶ್ನಿಸಿದರು.

- Advertisement -

Join Whatsapp