ಮೂಸೆವಾಲ ಹತ್ಯೆಯನ್ನು ರಾಜಕಾರಣಗೊಳಿಸಬೇಡಿ ಎಂದ ದೆಹಲಿ ಮುಖ್ಯಮಂತ್ರಿ

Prasthutha|

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯಾಗಿದ್ದು ಬೇಸರದ ಸಂಗತಿ. ಆದರೆ, ಅದನ್ನೇ ಹಿಡಿದು ರಾಜಕೀಯ ಮಾಡಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

- Advertisement -

ದೆಹಲಿಯ ರೋಹಿಣಿ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಈಗಾಗಲೇ ಪಂಜಾಬ್ ಮುಖ್ಯಮಂತ್ರಿ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪಂಜಾಬಿನಲ್ಲಿ ಏನೆಲ್ಲಾ ಘಟನೆಗಳು ನಡೆದಿವೆಯೋ ಅವುಗಳ ಸುತ್ತ ರಾಜಕಾರಣ ಮಾಡಬಾರದು. ಆ ವಿಶ್ವಾಸ ನನಗಿದೆ ಎಂದರು.

ರಾಜ್ಯ ಸರ್ಕಾರ ಭದ್ರತೆಯನ್ನು ವಾಪಸ್ ಪಡೆದ ನಂತರದ ದಿನದಲ್ಲಿ ಪಂಜಾಬಿನ ಮಾನ್ಸಿ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿಗೆ 28 ವರ್ಷದ ಮೂಸೆವಾಲ ಬಲಿಯಾಗಿದ್ದರು.

Join Whatsapp