ರಾಮ ಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರದ ಆರೋಪ ಮಾಡುವವರು ರಶೀದಿ ತೋರಿಸಿ ದೇಣಿಗೆ ಹಿಂಪಡೆಯಲಿ : ಸಾಕ್ಷಿ ಮಹಾರಾಜ್

Prasthutha|

ಉನ್ನಾವೊ : ರಾಮ ಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವವರು ತಮ್ಮ ರಶೀದಿ ತೋರಿಸಿ ತಾವು ನೀಡಿದ್ದ ದೇಣಿಗೆಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಹೇಳಿದ್ದಾರೆ.

- Advertisement -

ಈಗ ಭ್ರಷ್ಟಾಚಾರದ ಆರೋಪ ಮಾಡುತ್ತಿರುವವರು ಹಿಂದೆ ರಾಮ ಭಕ್ತರ ಮೇಲೆ ಕಿಡಿಕಾರಿದ್ದವರು ಎಂದು ಸಾಕ್ಷಿ ಮಹಾರಾಜ್‌ ಹೇಳಿದ್ದಾರೆ.

ಬಾಬರಿ ಮಸೀದಿ ಬಳಿ ಹಕ್ಕಿಯನ್ನೂ ಸುಳಿಯಲು ಬಿಡುವುದಿಲ್ಲ ಎಂದು ಅವರು ಹೇಳಿದ್ದರು. ಅವರ ಎಲ್ಲಾ ಪ್ರಶ್ನೆಗಳಿಗೆ ತಕ್ಕುದಾದ ಉತ್ತರ ನೀಡಿ, ರಾಮ ಜನ್ಮಭೂಮಿಯಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ. ಇಂತಹ ಜನರು ಆಧಾರ ರಹಿತ ಆರೋಪಗಳನ್ನು ಮಾಡುವುದಲ್ಲದೆ ಬೇರೇನೂ ಮಾಡಲಾರರು ಎಂದು ಅವರು ತಿಳಿಸಿದ್ದಾರೆ.

- Advertisement -

ತನ್ನ ಇಡೀ ಜೀವನವನ್ನು ಶ್ರೀರಾಮನಿಗಾಗಿ ಮುಡಿಪಾಗಿಟ್ಟ ಚಂಪತ್‌ ರಾಯ್‌ ಬಗ್ಗೆ ಆರೋಪಿಸುವುದು ಅರ್ಥಹೀನವಾದುದು. ಎಎಪಿಯ ಸಂಜಯ್‌ ಸಿಂಗ್‌ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದರೆ, ರಶೀದಿ ತೋರಿಸಿ ತನ್ನ ಹಣ ಹಿಂಪಡೆಯಲಿ. ಅಖಿಲೇಶ್‌ ಯಾದವ್‌ ಕೂಡ ದೇಣಿಗೆ ನೀಡಿದ್ದಾರೆ. ಅವರೂ ರಶೀದಿ ತೋರಿಸಿ ಹಣ ಹಿಂಪಡೆಯಬಹುದು ಎಂದು ಸಾಕ್ಷಿ ಮಹಾರಾಜ್‌ ಹೇಳಿದ್ದಾರೆ.

Join Whatsapp