ವಿನಾಯಕ ಬಾಳಿಗಾ ಕೊಲೆ ಖಂಡಿಸಿ ಸಭೆ ಮೆರವಣಿಗೆ

Prasthutha|

ಮಂಗಳೂರು: ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾಗಿ ಇಷ್ಟು ವರ್ಷವಾದರೂ ಕೊಲೆಗಾರರು ಆಳುವ ಪಕ್ಷದವರ ಜೊತೆಗೆ ಓಡಾಡುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಖಂಡಿಸಿ ದೇಶಪ್ರೇಮಿ ಸಂಘಟನೆಗಳು ಸಭೆ ಮತ್ತು ಪ್ರತಿಭಟನಾ ಮೆರವಣಿಗೆ ನಡೆಸಿದವು.

- Advertisement -


ವೆಂಕಟರಮಣ ದೇವಾಲಯದ ಹಣ ಅವ್ಯವಹಾರ ಬಯಲು ಮಾಡಿದ್ದೇ ವಿನಾಯಕ ಬಾಳಿಗಾ ಕೊಲೆಗೆ ಕಾರಣ ಎಂದು ಆಪಾದಿಸಲಾಯಿತು. ಆ ಸಂಬಂಧ ರಥಬೀದಿಯ ವೆಂಕಟರಮಣ ದೇವಾಲಯದ ಎದುರು ಸಭೆ ನಡೆದು, ಬಾಳಿಗಾರ ಮನೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.


ವಿಚಾರವಾದಿ ನರೇಂದ್ರ ನಾಯಕ್ ನಾಯಕತ್ವದಲ್ಲಿ ಸಭೆ ಮೆರವಣಿಗೆ ನಡೆಯಿತು. ಪ್ರಗತಿಪರ ಸಂಘಟನೆಗಳ ನಾಯಕರು ಇದರಲ್ಲಿ ಭಾಗವಹಿಸಿದ್ದರು.
ವಾಸುದೇವ ಉಚ್ಚಿಲ್, ವಿದ್ಯಾ ನಾಯಕ್, ಸೋಮನಾಥ ನಾಯಕ್, ಸೋನ್ಸ್, ಮೊದಲಾದವರು ಇದರಲ್ಲಿ ಪಾಲ್ಗೊಂಡರು.

Join Whatsapp