ಉತ್ತರ ಪ್ರದೇಶ । ದಂಪತಿ ಸೇರಿ ಒಂದೇ ಕುಟುಂಬದ ಐವರ ಬರ್ಬರ ಕೊಲೆ

Prasthutha|

ಲಕ್ನೋ: ದಂಪತಿ ಸೇರಿ ಒಂದೇ ಕುಟುಂಬದ ಐವರನ್ನು ಮಾರಕಾಯುಧದ ಮೂಲಕ ಕತ್ತು ಸೀಳಿ ಬರ್ಬರವಾಗಿ ಕೊಲೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಉತ್ತರ ಪ್ರದೇಶದ ಪ್ರಯಾಗ್’ರಾಜ್ ಎಂಬಲ್ಲಿ ನಡೆದಿದೆ.

- Advertisement -

ನವಾಬ್’ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಖಗಲ್’ಪುರ ಎಂಬ ದಂಪತಿ ಮತ್ತು ಮೂರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೃತರನ್ನು ರಾಹುಲ್ ತಿವಾರಿ, ಪತ್ನಿ ಪ್ರೀತಿ ತಿವಾರಿ, ಮೂವರು ಮಕ್ಕಳಾದ ಮಾಹಿ, ಪಿಹು ಪೊಹು ಎಂದು ಗುರುತಿಸಲಾಗಿದ್ದು, ಈ ಭೀಕರ ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಸದ್ಯ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

Join Whatsapp