ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಗೌರವ

Prasthutha|

ನವದೆಹಲಿ: ದೇಶದ 73ನೇ ಗಣರಾಜೋತ್ಸವ ಹಿನ್ನೆಲೆಯಲ್ಲಿ ಇಂದು ಪೊಲೀಸ್ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಘೋಷಿಸಿದ್ದು, ರಾಜ್ಯದ ಗುಪ್ತದಳದ ಮುಖ್ಯಸ್ಥ ಎಡಿಜಿಪಿ ದಯಾನಂದ ಅವರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ದೊರೆತಿದೆ.
ದಯಾನಂದ ಅವರ ಜೊತೆಗೆ ಮತ್ತು ಅಪರಾಧ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿ ಹಿತೇಂದ್ರ ಅವರಿಗೆ ವಿಶಿಷ್ಟ ರಾಷ್ಟ್ರಪತಿಗಳ ಪೊಲೀಸ್ ಪದಕ ದೊರೆತಿದೆ.

- Advertisement -

ದಯಾನಂದ, ಹಿತೇಂದ್ರ ಸೇರಿ ಗೌರವಾನ್ವಿತ ಸೇವೆಗಾಗಿ ರಾಜ್ಯದ 19 ಅಧಿಕಾರಿಗಳಿಗೆ ಪೊಲೀಸ್ ಪದಕ ನೀಡಲಾಗಿದೆ.
ದೇಶದ 939 ಪೊಲೀಸ್ ಸಿಬ್ಬಂದಿ ಪೈಕಿ 189 ಅಧಿಕಾರಿಗಳಿಗೆ ಶೌರ್ಯಕ್ಕಾಗಿ ಪದಕ ನೀಡಲಾಗುತ್ತಿದ್ದು, 88 ಅಧಿಕಾರಿಗಳಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಘೋಷಿಸಲಾಗಿದೆ. ಗೌರವಾನ್ವಿತ ಸೇವೆಗಾಗಿ 662 ಮಂದಿಗೆ ಪೊಲೀಸ್ ಪದಕ ಘೋಷಿಸಿದೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಅಧಿಕಾರಿಗಳು ರಾಜ್ಯಪಾಲರಿಂದ ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Join Whatsapp