ಮುಂಬೈ | ಠಾಕ್ರೆ ಬಣ ತೊರೆದ ಸಂಸದ ಗಜಾನನ ಕೀರ್ತಿಕರ್

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆಯ ಠಾಕ್ರೆ ಮತ್ತು ಶಿಂಧೆ ಬಣಗಳ ಮಧ್ಯೆ ಕಚ್ಚಾಟದ ಬೆನ್ನಲ್ಲೇ ಸಂಸದ ಗಜಾನನ ಕೀರ್ತಿಕರ್ ಅವರು ಠಾಕ್ರೆ ಬಣ ತೊರೆದು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ.

- Advertisement -

ಶಿವಸೇನೆಯ 18 ಸಂಸದರ ಪೈಕಿ ಕೀರ್ತಿಕರ್ ಅವರು ಶಿಂಧೆ ಬಣ ಸೇರ್ಪಡೆಯಾಗುತ್ತಿರುವ 13ನೇ ಸಂಸದರಾಗಿದ್ದು, 56 ಶಾಸಕರ ಪೈಕಿ 40 ಶಾಸಕರು ಶಿಂಧೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮುಂಬೈ ವಾಯವ್ಯ ಕ್ಷೇತ್ರದ ಸಂಸದ ಗಜಾನನ ಕೀರ್ತಿಕರ್ ಅವರು ಇಂದು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು ಮತ್ತು ನಾವು ಅವರಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಗತಿಗೆ ಶುಭ ಹಾರೈಸಿದ್ದೇವೆ ಎಂದು ತಿಳಿಸಿದ್ದಾರೆ.

Join Whatsapp