ಅಮೃತಸರದಲ್ಲಿ ಗುರು ಗ್ರಂಥ ಸಾಹಿಬ್ ಅಪವಿತ್ರ ಆರೋಪ: ವ್ಯಕ್ತಿಯ ಭೀಕರ ಹತ್ಯೆ

Prasthutha|

ಚಂಡೀಗಢ: ಅಮೃತಸರದ ಪವಿತ್ರ ಗುರು ಗ್ರಂಥ ಸಾಹಿಬ್ ಸುವರ್ಣ ಮಂದಿರ ಅನ್ನು ಅಪವಿತ್ರಗೊಳಿಸಲು ಯತ್ನಿಸಿದ್ದಾನೆ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ನಡೆಸಲಾಗಿದೆ.

- Advertisement -

ಉತ್ತರ ಪ್ರದೇಶಕ್ಕೆ ಸೇರಿದ ವ್ಯಕ್ತಿಯೊಬ್ಬ ನಿರ್ಬಂಧಿತ ಸ್ಥಳಕ್ಕೆ ಪ್ರವೇಶಿಸಿ ಗುರು ಗ್ರಂಥ ಸಾಹಿಬ್ ಎದುರು ಇಟ್ಟಿದ್ದ ತಲವಾರನ್ನು ಕಿತ್ತೆಸೆದಿದ್ದಾನೆ ಎಂಬ ಆರೋಪದಲ್ಲಿ ಹತ್ಯೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಪವಿತ್ರ ಗುರು ಗ್ರಂಥ ಸಾಹಿಬ್ ಸುವರ್ಣ ಮಂದಿರವನ್ನು ಅಪವಿತ್ರಗೊಳಿಸಿದ ವ್ಯಕ್ತಿಯನ್ನು ಹತ್ಯೆಗೂ ಮುನ್ನ ಭದ್ರತಾ ಸಿಬ್ಬಂದಿಗಳು ಹಿಡಿದು ಗುರುದ್ವಾರ ಪರ್ಬಂಧಕ್ ಸಮಿತಿ ಕಚೇರಿಗೆ ಹಸ್ತಾಂತರಿಸಿದ್ದರು.

- Advertisement -

ಘಟನೆಗೆ ಸಂಬಂಧಿಸಿದ ವೀಡಿಯೋ SGPG ಗೇಟ್ ನ ಸಮೀಪ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸುಮಾರು 20 ರಿಂದ 25 ವಯಸ್ಸಿನ ವ್ಯಕ್ತಿ ತಡೆಬೇಲಿಯನ್ನು ಹಾರಿ ಸುವರ್ಣ ಮಂದಿರವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ ಆತನನ್ನು ಹಿಡಿದು ಕಾರಿಡಾರ್ ಗೆ ತಂದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಮೃತಸರದ ಉಪ ಪೊಲೀಸ್ ಆಯುಕ್ತ ಪರ್ಮಿಂದರ್ ಸಿಂಗ್ ಭಂಡಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Join Whatsapp