ದೀಪಾವಳಿ ಹಬ್ಬದಂದು ತನ್ನ ಸಿಬ್ಬಂದಿಗಳಿಗೆ ಕಾರು, ಬೈಕ್ ಗಳನ್ನು ಉಡುಗೊರೆಯಾಗಿ ನೀಡಿದ ಜ್ಯುವೆಲ್ಲರಿ ಶಾಪ್ ಮಾಲೀಕ

Prasthutha|

ಚೆನ್ನೈ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತನ್ನ ಸಿಬ್ಬಂದಿಗಳಿಗೆ ಆಭರಣ ಅಂಗಡಿಯ ಮಾಲೀಕನೊಬ್ಬ ಕಾರು ಮತ್ತು ಬೈಕುಗಳನ್ನು ಉಡುಗೊರೆಯಾಗಿ ನೀಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

- Advertisement -

ಚೆನ್ನೈನ ಚಲಾನಿ ಜುವೆಲರ್ಸ್ ಎಂಬ ಚಿನ್ನದಂಗಡಿಯ ಮಾಲೀಕ ಜಯಂತಿ ಲಾಲ್ ಚಯಂತಿ ಎಂಬುವವರು ದೀಪಾವಳಿ ಬೋನಸ್ ಆಗಿ ತಮ್ಮ ನೌಕರರಿಗೆ ಕಾರು ಮತ್ತು ಬೈಕ್ ಕೊಟ್ಟು ಸರ್ಪ್ರೈಸ್ ನೀಡಿದ್ದಾರೆ

ತನ್ನನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಕ್ಕಾಗಿ ಸಿಬ್ಬಂದಿಗಳನ್ನು ಶ್ಲಾಘಿಸಿದ ಜಯಂತಿ ಲಾಲ್ , ಅವರು ಎಲ್ಲಾ ಏಳುಬೀಳುಗಳಲ್ಲಿಯೂ  ನನ್ನ ಜೊತೆಗಿದ್ದು  ಕೆಲಸ ಮಾಡಿದ್ದಾರೆ. ಹೀಗಾಗಿ, 10 ಮಂದಿಗೆ ಕಾರು ಮತ್ತು 20 ಮಂದಿ ನೌಕರರಿಗೆ ಬೈಕ್ಗಳನ್ನು ಉಡುಗೊರೆಯಾಗಿ ನೀಡಿದ್ದೇನೆ. ಇದು ಅವರ ಕೆಲಸವನ್ನು ಪ್ರೋತ್ಸಾಹಿಸುವುದಕ್ಕಾಗಿ ನೀಡುತ್ತಿದ್ದು, ಇದರಿಂದ ನನಗೂ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

- Advertisement -

ಈ ಉಡುಗೊರೆಗಾಗಿ ಅವರು ₹1.2 ಕೋಟಿ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp