ಹೈದರಾಬಾದ್ । ರಾಮನವಮಿ ರ‍್ಯಾಲಿಯಲ್ಲಿ ಧ್ವೇಷ ಭಾಷಣ; ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

Prasthutha|

ಹೈದರಾಬಾದ್: ರಾಮನವಮಿ ಪ್ರಯುಕ್ತ ನಡೆದ ರ‍್ಯಾಲಿಯಲ್ಲಿ ಪ್ರಚೋದನಾಕಾರಿ ಭಾಷಣಗೈದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ರಾಮನವಮಿ ಪ್ರಯುಕ್ತ ಆಯೋಜಿಸಿದ ಕಾರ್ಯವೊಂದರಲ್ಲಿ ಮಾತನಾಡಿದ ರಾಜಾ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ದೇಶವನ್ನು ಸ್ವಚ್ಚಗೊಳಿಸಲು ಬುಲ್ಡೋಝರ್ ಬಳಸಲಿದ್ದಾರೆ ಮತ್ತು ಶೀಘ್ರದಲ್ಲೇ ಭಾರತವನ್ನು ಹಿಂದೂ ರಾಷ್ಟ್ರವನ್ನು ಪರಿವರ್ತಿಸುತ್ತಾರೆ ಎಂದು ತಿಳಿಸಿದ್ದರು.

ಶಾಸಕ ರಾಜಾ ಸಿಂಗ್ ಅವರು ಸೀತಾರಾಂಬಾಗ್ ನಿಂದ ಮೆರವಣಿಗೆಯನ್ನು ಮುನ್ನಡೆಸಿದ್ದರು.

- Advertisement -

ಸದ್ಯ ಆರೋಪಿ ರಾಜಾ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 153 ಎ, 295 ಎ, 504, 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆರವಣಿಗೆಯ ವೇಳೆ ಮುಸ್ಲಿಮರನ್ನು ಗುರಿಯಾಗಿಸಿ ಪ್ರಚೋದನಕಾರಿ ಘೋಷಣೆ ಕೂಗುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಮತ್ತೊಂದೆಡೆ, ರಾಮನವಮಿ ಆಚರಣೆಗೆ ನೀಡಿದ ಅನುಮತಿ ಷರತ್ತುಗಳನ್ನು ರಾಜಾಸಿಂಗ್ ಉಲ್ಲಂಘಿಸಿದ್ದಕ್ಕಾಗಿ ಸುಲ್ತಾನ್ ಬಝಾರ್ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಭಾನುವಾರ ದೇಶದೆಲ್ಲೆಡೆ ಸಂಘಪರಿವಾರ ಆಚರಿಸಿದ ರಾಮನವಮಿ ಮೆರವಣಿಗೆ ವೇಳೆ ಕನಿಷ್ಠ ಎಂಟು ರಾಜ್ಯಗಳಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ವರದಿಯಾಗಿದೆ.

Join Whatsapp