ಮೀರತ್ ನಲ್ಲಿ ಯುವ ಜೋಡಿಗೆ ಹಲ್ಲೆ ಪ್ರಕರಣ: ಹಿಂದೂ ಜಾಗರಣ್ ಮಂಚ್ ನಾಯಕನ ವಿರುದ್ಧ ಎಫ್.ಐ.ಆರ್

Prasthutha|

ಕಾನ್ಪುರ: ಮುಸ್ಲಿಮ್ ವ್ಯಕ್ತಿ ಸೇರಿದಂತೆ ಜೋಡಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ್ ಮಂಚ್ ನ ಸ್ಥಳೀಯ ಮುಖಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ದುಷ್ಕರ್ಮಿಗಳ ಗುಂಪೊಂದು ಮೀರತ್ ನ ಗೋಲ್ ಮಾರ್ಕೆಟ್ ನಲ್ಲಿ ಯುವತಿಯನ್ನು ವ್ಯಕ್ತಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆಯುವಂತೆ ಬಲವಂತಪಡಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಿಂದೂ ಜಾಗರಣ್ ಮಂಚ್ ನ ಸ್ಥಳೀಯ ಮುಖಂಡ ಸಚಿನ್ ಸಿರೋಹಿ ಮತ್ತು ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಮಧ್ಯೆ ಹಲ್ಲೆಗೊಳಗಾದ ಯುವಕ ಮತ್ತು ಯುವತಿಯನ್ನು ಠಾಣೆಗೆ ಕರೆಯಿಸಿ ಪೊಲೀಸರು ವಿಚಾರಣೆ ನಡೆಸಿದಾಗ, ಆತ ತನ್ನ ಸ್ನೇಹಿತ ಎಂದು ಮಾಹಿತಿ ನೀಡಿದ್ದಳು. ಘಟನೆಯ ವಾಸ್ತವವನ್ನು ಅರಿಯಲು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸುವುದಾಗಿ ಎಸ್.ಎಸ್.ಪಿ ಅಧಿಕಾರಿ ಪ್ರಭಾಕರ್ ಚೌಧರಿ ತಿಳಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 323, 147, ಮತ್ತು 109 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp