ಚಿಕ್ಕಮಗಳೂರು: ‘ಹಿಂದೂ ಕಾರ್ಯಕರ್ತ’ನ ಮೇಲೆ ಬಿಜೆಪಿಗರಿಂದ ಮಾರಣಾಂತಿಕ ಹಲ್ಲೆ

Prasthutha|

ಚಿಕ್ಕಮಗಳೂರು: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದರೂ, ಅಹಿತಕರ ಘಟನೆ ವರದಿಯಾಗಿದೆ. ಉಜೈನಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ‘ಹಿಂದೂ’ ಕಾರ್ಯಕರ್ತನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

- Advertisement -

ಪ್ರವೀಣ ಖಾಂಡ್ಯ ಹಲ್ಲೆಗೊಳಗಾದ ‘ಹಿಂದೂ’ ಕಾರ್ಯಕರ್ತ. ಶುಕ್ರವಾರ ಮತದಾನ ಮಾಡಲು ಮತಗಟ್ಟೆಗೆ ಹೋಗಿದ್ದ ಸಂದರ್ಭದಲ್ಲಿ ಆತನ ಮೇಲೆ ಏಕಾಏಕಿ ಬಂದು ಗುಂಪು ದಾಳಿ ನಡೆಸಿದ್ದಾರೆನ್ನಲಾಗಿದೆ. ಹಠಾತ್ ನಡೆದ ಹಲ್ಲೆಯಿಂದಾಗಿ ಪ್ರವೀಣ್ ಖಾಂಡ್ಯನಿಗೆ ತಲೆ, ಕೈಗಳಿಗೆ ಗಂಭೀರ ಗಾಯವಾಗಿದ್ದು, ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಈ ಪ್ರವೀಣ್. ಹಳೇ ವೈಷಮ್ಯದಿಂದ ಬಿಜೆಪಿ ಕಾರ್ಯಕರ್ತರೇ ಆತನ ಮೇಲೆ ದಾಳಿ ನಡೆಸಿದ್ದಾರೆ. ಆಸ್ಪತ್ರೆ ಮುಂಭಾಗ ನೂರಾರು ಸಂಖ್ಯೆಯಲ್ಲಿ ಹಿಂದುತ್ವ ಕಾರ್ಯಕರ್ತರು ಎನ್ನಲಾದ ನೂರಾರು ಜನರು ಜಮಾವಣೆಯಾಗಿದ್ದರು. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

Join Whatsapp