ಟಿ-20 ಸೋತ ಭಾರತ | ಸುಳ್ಳಾದ 11 ಜ್ಯೋತಿಷಿಗಳ ಭವಿಷ್ಯ: ನೆಟ್ಟಿಗರಿಂದ ಟ್ರೋಲ್

Prasthutha|

ನವದೆಹಲಿ: ಟಿ-20 ವಿಶ್ವಕಪ್ ಪಂದ್ಯ ಆರಂಭಕ್ಕೂ ಮುನ್ನ ಎಬಿಪಿ ನ್ಯೂಸ್ ನಲ್ಲಿ 11 ಜ್ಯೋತಿಷಿಗಳು ಭಾರತ ಇಂಗ್ಲೆಂಡ್ ವಿರುದ್ಧ ಗೆಲ್ಲುತ್ತದೆ ಎಂದು ಹೇಳಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

- Advertisement -

ಟಿ-20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯಕ್ಕಿಂತ ಮುನ್ನ ಎಬಿಪಿ ನ್ಯೂಸ್ ನಲ್ಲಿ ಜ್ಯೋತಿಷ್ಯರನ್ನು ಕರೆಸಿ ಚರ್ಚೆ ನಡೆಸಲಾಗಿತ್ತು. ಚರ್ಚೆ ಪ್ರಾರಂಭಕ್ಕೂ ಮುನ್ನ ಶಂಖ ಊದಿ ಚಾಲನೆ ನೀಡಲಾಗಿದ್ದು, ಆಟಗಾರರ ಗ್ರಹಗಳ ಸ್ಥಿತಿಗಳ ಬಗ್ಗೆ ಕೇಳಲಾಗಿತ್ತು.

ಇದಕ್ಕೆ ಭಾರತ ಗೆಲ್ಲುವ ಸಾಧ್ಯತೆ ಇದೆ ಎಂದು ಒಬ್ಬರು ಹೇಳಿದರು. ಕಠಿಣ ಸ್ಪರ್ಧೆ ಇದೆ ಅಂತಿಮ ಗೆಲುವು ಭಾರತದ್ದು ಎಂದು ಇನ್ನೊಬ್ಬರು ಹೇಳಿದ್ದರು. ಭಾರತ ತಂಡದ ಮೂವರ ಜಾತಕ ಗುರು ಆಗಿದೆ, ಗುರು ಬಲದಿಂದ ಗೆಲುವು ಭಾರತಕ್ಕೆ ಸಿಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದರು. ಒಟ್ಟಿನಲ್ಲಿ ಭಾರತ ಗೆದ್ದೇ ತೀರುತ್ತದೆ ಎಂಬ ಅಭಿಪ್ರಾಯವನ್ನು ಜ್ಯೋತಿಷಿಗಳ ಗುಂಪು ಭವಿಷ್ಯ ನುಡಿದಿತ್ತು.

- Advertisement -

ಆದರೆ ಕೊನೆಗೆ  ಭಾರತೀಯ ತಂಡ ಹೀನಾಯ ಸೋಲುಂಡಿದ್ದು, ಜ್ಯೋತಿಷಿಗಳ ಭವಿಷ್ಯ ಸುಳ್ಳಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ.

Join Whatsapp