ನಾಡಿನೆಲ್ಲೆಡೆ ಸಂಭ್ರಮದ ಈದ್ ಮಿಲಾದ್ ಆಚರಣೆ

Prasthutha|

ಬೆಂಗಳೂರು: ಪ್ರವಾದಿ ಮುಹಮ್ಮದ್‌ ಪೈಗಂಬರರ ಜನ್ಮ ದಿನಾಚರಣೆಯನ್ನು ಕರಾವಳಿ ಸೇರಿದಂತೆ ರಾಜ್ಯಾದ್ಯಂತ  ಹಲವು ಕಡೆಗಳಲ್ಲಿ ಇಂದು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

- Advertisement -

ಮದರಸಾ ಮಕ್ಕಳಿಂದ ಪ್ರವಾದಿ ಕುರಿತ ಗಾನಗೀತೆಗಳು, ಪ್ರಭಾಷಣಗಳು ಮತ್ತಿತರ ಹಲವು ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯದ ನಾನಾ ಕಡೆಯಲ್ಲಿ ಏರ್ಪಡಿಸಲಾಯಿತು. ಕಾಲ್ನಡಿಗೆ ಜಾಥಾ ಮೂಲಕ ಪ್ರವಾದಿ ಜೀವನ ಸಂದೇಶವನ್ನು ಸಾರಲಾಯಿತು.

ಬಂದರ್‌ ನ ಕಂದಕ್‌ ಪ್ರದೇಶದಲ್ಲಿ ವಿದ್ಯಾರ್ಥಿಗಳಿಂದ ದಫ್‌ ಮೆರವಣಿಗೆ

ಮಂಗಳೂರು ನಗರದ ಬಂದರ್‌ ನ ಕಂದಕ್‌ ಪ್ರದೇಶದಲ್ಲಿ ದಫ್‌ ಮೂಲಕ ಮದ್ರಸಾ ವಿದ್ಯಾರ್ಥಿಗಳು ಮೆರವಣಿಗೆ ಸಾಗಿದರು. ಬೆಂಗಳೂರಿನಲ್ಲಿ ಅತಿದೊಡ್ಡ ಈದ್ ಮಿಲಾದ್ ಮೆರವಣಿಗೆಯ ಮೂಲಕ ಅಖಿಲ ಕರ್ನಾಟಕ ಮೀಲಾದ್-ಓ-ಜುಲೂಸ್-ಇ-ರಸೂಲ್ ಅಲಮೀನ್ ಪ್ರವಾದಿ ಜನ್ಮವನ್ನು ಆಚರಿಸಿದರು.

- Advertisement -

ಈ ಪ್ರಯುಕ್ತ ಬಂಟ್ವಾಳ ತಾಲೂಕಿನ ಮಿತ್ತಬೈಲ್ ನಲ್ಲಿ ಮುಹಿಯ್ಯುದ್ದೀನ್ ಮದರಸ ವತಿಯಿಂದ ಮೆರವಣಿಗೆ ಹಾಗೂ ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಖತೀಬರಾದ ಅಶ್ರಫ್ ಫೈಝಿ ಅವರ ನೇತೃತ್ವದಲ್ಲಿ ಪ್ರವಾದಿ ಕುರಿತ ಮೌಲಿದ್ ಮಜ್ಲಿಸ್ ನಡೆಸಲಾಯಿತು.

ಮಿತ್ತಬೈಲ್‌ ನಲ್ಲಿ ನಡೆದ ಮಿಲಾದ್‌ ಜಾಥಾ

ದ.ಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ, ಪುತ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ಜಾಥಾ ಮೂಲಕ ಸಂಭ್ರಮದ ಈದ್‌ ಮಿಲಾದ್‌ ಆಚರಿಸಲಾಯಿತು.

Join Whatsapp