ಮೇಲ್ಜಾತಿ ಮಹಿಳೆ ತಯಾರಿಸಿದ ಊಟ ನಿರಾಕರಿಸಿದ ದಲಿತ ವಿದ್ಯಾರ್ಥಿಗಳು

Prasthutha|

ಉತ್ತರಾಖಂಡ: ದಲಿತ ವಿದ್ಯಾರ್ಥಿಗಳ ಗುಂಪೊಂದು ಮೇಲ್ಜಾತಿ ಹಿಂದೂ ಮಹಿಳೆ ತಯಾರಿಸಿದ ಮಧ್ಯಾಹ್ನದ ಊಟವನ್ನು ತಿನ್ನಲು ನಿರಾಕರಿಸಿದ ಘಟನೆ ಉತ್ತರಾಖಂಡ್‌ ರಾಜ್ಯದ ಚಂಪಾವತ್ ಜಿಲ್ಲೆಯ ಸುಖಿಧಾಂಗ್‌ ನ ಸರ್ಕಾರಿ ಇಂಟರ್ ಕಾಲೇಜ್‌ ನಲ್ಲಿ ನಡೆದಿದೆ.

- Advertisement -

ಕಳೆದ ವಾರ, ದಲಿತ ಸಮುದಾಯಕ್ಕೆ ಸೇರಿದ ಸುನೀತಾ ದೇವಿ ಅವರು ತಯಾರಿಸಿದ ಊಟವನ್ನು ಮೇಲ್ಜಾತಿ ಹಿಂದೂ ವಿದ್ಯಾರ್ಥಿಗಳು ತಿನ್ನಲು ನಿರಾಕರಿಸಿದ್ದರು. ಆದರೆ ಗಾಯಕ್ಕೆ ಉಪ್ಪು ಸವರಿದ್ದ ರಾಜ್ಯ ಸರ್ಕಾರ ಸುನೀತಾ ದೇವಿ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು.

ಆದರೆ, ದಲಿತ ಸಮುದಾಯಕ್ಕೆ ಸೇರಿದ 23 ವಿದ್ಯಾರ್ಥಿಗಳು ಸುನಿತಾ ದೇವಿಯ ಬದಲಿಯಾಗಿ ನೇಮಕಗೊಂಡ ಮೇಲ್ಜಾತಿ ಹಿಂದೂ ಮಹಿಳೆ ವಿಮಿಲೇಶ್ ಉಪ್ರೇತಿ ಅವರು ತಯಾರಿಸಿದ ಊಟವನ್ನು ತಿನ್ನಲು ನಿರಾಕರಿಸುವ ಮೂಲಕ ಪ್ರತಿಭಟಿಸಿದ್ದಾರೆ.

Join Whatsapp