ವಾಹನದಲ್ಲಿ ದನ ಸಾಗಿಸುತ್ತಿದ್ದ ದಲಿತ ರೈತನ ಮೇಲೆ ಭಜರಂಗದಳ ಕಾರ್ಯಕರ್ತನಿಂದ ಹಲ್ಲೆ

Prasthutha|

‘ನಾವೇನೂ ಹಿಂದೂಗಳಲ್ಲವೇ’ ಎಂದು ಪ್ರತಿಭಟಿಸಿದ ದಲಿತರು

- Advertisement -

ಹಾಸನ: ಸಾಕಲು ವಾಹನದಲ್ಲಿ‌ ದನ ಸಾಗಿಸುತ್ತಿದ್ದ ಹಲಸುಲಿಗೆ ಗ್ರಾಮದ ಮಂಜು ಎಂಬ ದಲಿತ ರೈತನ ಮೇಲೆ ಭಜರಂಗದಳದ ಕಾರ್ಯಕರ್ತ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಮಂಜು ಎಂಬವರು ಸಾಕಲು ಬೇಕಾಗಿ ದನವನ್ನು ಕೊಂಡೊಯ್ಯುತ್ತಿರುವ ಸಂಧರ್ಭದಲ್ಲಿ ದೀಪು ಎಂಬ ಭಜರಂಗದಳ ಕಾರ್ಯಕರ್ತ ಅಡ್ಡಗಟ್ಟಿದ್ದಾನೆ. ಬಳಿಕ ಹಸು ಖರೀದಿಸಿದ ಲೈಸೆನ್ಸ್ ತೋರಿಸು ಒತ್ತಾಯಿಸಿದಾಗ ನಿನಗೆ ಯಾಕೆ ತೋರಿಸಬೇಕು ಎಂದು ಪ್ರಶ್ನಿಸಿದ ಮಂಜು ಮೇಲೆ ಹಲ್ಲೆ‌ ಮಾಡಿದ್ದಾನೆ ಎನ್ನಲಾಗಿದೆ.

- Advertisement -

ಕಸಾಯಿಖಾನೆಗೆ ಹಸುವನ್ನು ಸಾಗಿಸುತ್ತಿದ್ದೀರಾ ಎಂದು ಧಮ್ಕಿ ಹಾಕಿ ದಲಿತನ ಮೇಲೆ ಭಜರಂಗದಳದ ಕಾರ್ಯಕರ್ತ ಹಲ್ಲೆ ಮಾಡಿದ್ದನ್ನು ವಿರೋಧಿಸಿ ವಿವಿಧ ದಲಿತಪರ ಸಂಘಟನೆಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ ನಡೆಸಿವೆ.

ಈ ಸಂಧರ್ಭದಲ್ಲಿ ಮಾತಾಡಿದ ಪ್ರತಿಭಟನಾಕಾರರು ಭಜರಂಗದಳದವರು ಮಾತ್ರ ಹಿಂದೂಗಳೇ ನಾವು ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದ್ದು, ಇಂತಹವರಿಗೆ ಗೂಂಡಾಗಿರಿ ಮಾಡಲು ಅನುಮತಿ ಕೊಟ್ಟದ್ದು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ದುಷ್ಕರ್ಮಿಯನ್ನು ಬಂಧಿಸಬೇಕು .ಇಲ್ಲದಿದ್ದರೆ ಮುಂದೆ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎ‍‍ಚ್ಚರಿಕೆ ನೀಡಿದರು.

Join Whatsapp