ಮಂಗಳೂರು | ಮೊಬೈಲ್ ನಂಬರ್ ಕೊಟ್ಟು ಥಳಿಸಿಕೊಂಡ ಪ್ರಕರಣ: ಕಂಡಕ್ಟರ್ ಮಂಜುನಾಥ್ ಪೊಲೀಸ್ ವಶಕ್ಕೆ

Prasthutha|

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟು ಬಾಲಕಿಯ ತಾಯಿಯಿಂದ ಹಿಗ್ಗಾಮುಗ್ಗ ಥಳಿಸಿಕೊಂಡಿದ್ದ ಕೆನರಾ ಬಸ್ ನಿರ್ವಾಹಕನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿ ಬಾಗಲಕೋಟೆಯ ಗುಳೇದಗುಡ್ಡ ತಾಲ್ಲೂಕಿನ, ಲಿಂಗಾಪುರ ಗ್ರಾಮದ ನಿವಾಸಿ ಮಂಜುನಾಥ್ (21) ನನ್ನು ಪೊಲೀಸರು ವಿಚಾರಣೆ ನಡೆಸಲು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

- Advertisement -


ಆರೋಪಿ ಮಂಜುನಾಥ್ ವಿರುದ್ಧ ಸಂತ್ರಸ್ತೆ ಬಾಲಕಿಯ ತಾಯಿ ದೂರನ್ನು ನೀಡಿದರೆ ದೂರು ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.


ಸ್ಟೇಟ್ ಬ್ಯಾಂಕ್ ಟೂ ಮಂಗಳೂರು ಮಾರ್ಗವಾಗಿ ಸಂಚರಿಸುವ ಕೆನರಾ ಬಸ್ ನಲ್ಲಿ ಕೆಲವು ದಿನಗಳ ಹಿಂದೆ 8ನೇ ತರಗತಿಯ ವಿದ್ಯಾರ್ಥಿನಿಗೆ ಬಸ್ ನಿರ್ವಾಹಕ ಮಂಜುನಾಥ್ ಮೊಬೈಲ್ ನಂಬರ್ ನೀಡಿದ್ದ. ಈ ವಿಚಾರ ಬಾಲಕಿ ತನ್ನ ತಾಯಿಗೆ ತಿಳಿಸಿದ್ದು, ಆಕ್ರೋಶಗೊಂಡ ತಾಯಿ ನಿನ್ನೆ ಬೊಂದೆಲ್ ಬಳಿ ಬಸ್ಸು ನಿಲ್ಲಿಸಿ ಕಂಡಕ್ಟರ್ ಗೆ ಧರ್ಮದೇಟು ನೀಡಿದ್ದರು. ಆರೋಪಿಗೆ ಸಾರ್ವಜನಿಕರೊಂದಿಗೆ ಸೇರಿ ಬಾಲಕಿಯ ತಾಯಿ ಥಳಿಸುವ ದೃಶ್ಯ ವೈರಲ್ ಆಗಿತ್ತು. ಇದೀಗ ವೀಡಿಯೋ ಆಧರಿಸಿ ಪೊಲೀಸರು ನಿರ್ವಾಹಕನನ್ನು ಬಂಧಿಸಿದ್ದಾರೆ.

Join Whatsapp