ಬಿಪಿನ್ ರಾವತ್ ಮತ್ತು ಇತರರ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬ್ಯುಲನ್ಸ್ ಅಪಘಾತ !

Prasthutha|

ತಮಿಳುನಾಡಿನಲ್ಲಿ ನಿನ್ನೆ ಸೇನಾ ಹೆಲಿಕಾಪ್ಟರ್ ದುರಂತ ಸಂಭವಿಸಿ ಮೃತಪಟ್ಟ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್  ಮತ್ತು ಇತರ 11 ಸೇನಾ ಅಧಿಕಾರಿಗಳ ಪಾರ್ಥಿವ ಶರೀರವನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲನ್ಸ್ ಗಳ ಪೈಕಿ ಎರಡು ಆಂಬ್ಯುಲೆನ್ಸ್ ಗಳು ಪರಸ್ಪರ ಅಪಘಾತಕ್ಕೀಡಾಗಿರುವ ಘಟನೆ ರಾಜ್ಯದ ಮೆಟ್ಟುಪಾಳ್ಯಂ ಬಳಿ ನಡೆದಿದೆ. ಇದೊಂದು  ಸಣ್ಣ ಮಟ್ಟಿನ ಅಪಘಾತವಾಗಿದೆ ಎನ್ನಲಾಗಿದೆ.

- Advertisement -

ನಿನ್ನೆ ಮೃತಪಟ್ಟ ಸೇನಾ ವರಿಷ್ಠ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಮೃತದೇಹಗಳನ್ನು ನೀಲಗಿರಿಯ ಎಂಆರ್ ಸಿ ಬ್ಯಾರಕ್ಸ್ ಚೌಕದಿಂದ ಸೂಲೂರು ವಾಯುನೆಲೆಗೆ ಬೆಂಗಾವಲು ಪಡೆಯೊಂದಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಒಂದು ಆಂಬ್ಯುಲನ್ಸ್ ಮುಂದಿನಿಂದ ಚಲಿಸುತ್ತಿದ್ದ ಮತ್ತೊಂದು ಆಂಬ್ಯುಲನ್ಸ್’ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಲ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ..  ಕೂಡಲೇ ಅದರಲ್ಲಿದ್ದ ಯೋಧರ ಪಾರ್ಥಿವ ಶರೀರಗಳನ್ನು ಬೇರೊಂದು ಆಯಂಬುಲೆನ್ಸ್ ಗೆ ವರ್ಗಾಯಿಸಿ ವಾಯುನೆಲೆಗೆ  ತರಲಾಗಿದೆ.

Join Whatsapp