ಬೊಳ್ಳೂರಿನಲ್ಲಿ ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರರ ಅನಾವರಣ ಕಾರ್ಯಕ್ರಮ

Prasthutha|

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರರ ಅನಾವರಣ” ಕಾರ್ಯಕ್ರಮವನ್ನು ಹಳೆಯಂಗಡಿ ಸಮೀಪದ ಬೊಳ್ಳೂರಿನ ಮುಹಿಯ್ಯುದ್ದೀಮ್ ಜುಮಾ ಮಸ್ಜಿದ್ ನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

- Advertisement -

ಕಾರ್ಯಕ್ರಮದ ಅಂಗವಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ತೆರೆಮರೆಯಲ್ಲಿದ್ದ ವೀರರನ್ನು ಪರಿಚಯಿಸುವ ಮಾಹಿತಿ ಫಲಕಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು.

ಈ ಸಂದರ್ಭದಲ್ಲಿ ಬೊಳ್ಳೂರು ಮುಹಿಯ್ಯುದ್ದೀನ್ ಜುಮಾ‌ ಮಸ್ಜಿದ್ ಅಧ್ಯಕ್ಷ ಟಿ.ಎಚ್.ಎ ಅಬ್ದುಲ್ ರಹಿಮಾನ್, ಕಾರ್ಯದರ್ಶಿಗಳಾದ ಬಿ.ಎಂ.ಸುಲೈಮಾನ್, ಅಬ್ದುಲ್ ಕರೀಂ ಬೊಳ್ಳೂರು, ಅಬ್ದುಲ್ ಹಮೀದ್ ಎಂ.ಸಿ.ಎಫ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp