ವಿದ್ಯಾರ್ಥಿಗಳಿಗೆ ಅಂಚೆ ಕಛೇರಿಗಳಲ್ಲಿ ಶೂನ್ಯ ಶಿಲ್ಕು ಉಳಿತಾಯ ಖಾತೆ

Prasthutha|

ಮಂಗಳೂರು: ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ನಿರ್ದೇಶನದಂತೆ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರ ಯೋಜನೆಯಡಿ ಪಾವತಿಯಾಗುವ ಮೊತ್ತವನ್ನು ಪಡೆಯಲು ಮೊತ್ತವನ್ನು ಪಡೆಯಲು ಅಂಚೆ ಕಛೇರಿಗಳಲ್ಲಿ ಶೂನ್ಯ ಶಿಲ್ಕು ಉಳಿತಾಯ ಖಾತೆ ತೆರೆಯಲು ಅವಕಾಶ ನೀಡಲಾಗಿದೆ.    

- Advertisement -

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಿಗಲಿರುವ ನೆರ ನಗದು ವರ್ಗಾವಣೆಯನ್ನು ವಿದ್ಯಾರ್ಥಿಗಳು ಪಡೆಯಲು ಅನುಕೂಲವಾಗುವಂತೆ ಅಂಚೆ ಕಛೇರಿಗಳಲ್ಲಿ ಶೂನ್ಯ ಶಿಲ್ಕು ಖಾತೆಯನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ವಿದ್ಯಾರ್ಥಿಯ ಹಾಗೂ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಪ್ರತಿ, ಫೋಟೋ ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದ ದೃಢೀಕರಣ ಪತ್ರ ಹಾಗೂ ಆಧಾರನ್ನು ಖಾತೆಗೆ ಜೋಡಿಸಲು ಅಧಿಕೃತ ನಮೂನೆಯಲ್ಲಿ ಅರ್ಜಿ ನೀಡಿ, ಈ ಖಾತೆಯನ್ನು ಯಾವುದೇ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ. ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಈ ಕೆಳಗಿನ ಅನುಕೂಲತೆಗಳಿವೆ.

  1. ಶೂನ್ಯ ಶಿಲ್ಕು (Zero Balance) ಮೂಲಕ ಖಾತೆ ತೆರೆಯಬಹುದು.
  2. ಮನೆಯ ಸಮೀಪದ ಅಂಚೆ ಕಚೇರಿಯಲ್ಲಿಯೇ ಖಾತೆ ತೆರೆಯಬಹುದು.
  3. ಈ ಯೋಜನೆ ಮಾತ್ರವಲ್ಲದೇ, ಇನ್ನಿತರ ಯೋಜನೆಗಳಲ್ಲಿ ಪಾವತಿಯಾಗುವ ನೇರ ನಗದು ವರ್ಗಾವಣೆಯ ಮೊತ್ತವನ್ನು ಈ ಖಾತೆಯ ಮೂಲಕ ಪಡೆಯಬಹುದಾಗಿದೆ.
  4. ವಿದ್ಯಾರ್ಥಿಗಳಿಗೆ ಯಾವುದೇ ಕಾರಣದಿಂದ  ಆಧಾರ್ ಈಗಾಗಲೇ ನೋಂದಣಿ ಆಗಿರದಿದ್ದರೆ ಅಥವಾ ನೋಂದಣಿ ಆಗಿದ್ದು ಅದರಲ್ಲಿ ಯಾವುದೇ ಪರಿಷ್ಕರಣೆ ಇದ್ದಲ್ಲಿ, ಅಂಚೆ ಕಛೇರಿಯಲ್ಲಿಯೇ ನೋಂದಣಿ ಮಾಡಲು ಅವಕಾಶವಿದೆ. ಎಲ್ಲಾ ಪೋಷಕರು/ವಿದ್ಯಾರ್ಥಿಗಳು ಇದನ್ನು ಗಮನಿಸಬೇಕಾಗಿ ವಿನಂತಿ.
Join Whatsapp