ಮಂಗಳೂರು: ಸ್ಕಿಡ್ ಆಗಿ ಬಿದ್ದ ದ್ವಿಚಕ್ರ ವಾಹನ ಸವಾರರು; ಗಾಯಾಳುಗಳ ನೆರವಿಗೆ ಧಾವಿಸಿ ಬಂದ ಪಶ್ಚಿಮ ವಲಯ ಐಜಿಪಿ

Prasthutha|

ಮಂಗಳೂರು: ಸ್ಕಿಡ್ ಆಗಿ ಬಿದ್ದ ದ್ವಿಚಕ್ರ ವಾಹನ ಸವಾರರಿಬ್ಬರನ್ನ ಪಶ್ಚಿಮ ವಲಯ ಐಜಿಪಿ ತನ್ನ ಸರಕಾರಿ ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ನೆರವಾಗಿದ್ದಾರೆ.

- Advertisement -

ನಗರದ ಯೆಯ್ಯಾಡಿ ಬಳಿ ಕರ್ತವ್ಯಕ್ಕೆಂದು ತೆರಳುತ್ತಿದ್ದ ವೇಳೆ ಏಕಾಏಕಿ ಹಸುವೊಂದು ರಸ್ತೆಗೆ ಅಡ್ಡಲಾಗಿ ಬಂದಿರುವುದರಿಂದ  ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಿಂದ ದ್ವಿಚಕ್ರ ವಾಹನ ಸವಾರರಾದ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಬಾಲ ಸುಬ್ರಹ್ಮಣ್ಯ, ಎಂಆರ್ಪಿಎಲ್ ನೌಕರ ರಾಜು ಕೆ. ಗಾಯಗೊಂಡಿದ್ದಾರೆ.

ಇದೇ ಸಮಯಕ್ಕೆ ಅದೇ ದಾರಿಯಾಗಿ ಮೇರಿಹಿಲ್ ಕಡೆಯಿಂದ ಕಚೇರಿಗೆಂದು ನಗರದ ಕಡೆಗೆ ಆಗಮಿಸುತ್ತಿದ್ದ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ತನ್ನ ವಾಹನದಲ್ಲಿ ಗಾಯಾಳುಗಳನ್ನ ಕುಳ್ಳಿರಿಸಿ ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Join Whatsapp