ಗಾಸಿಪ್’ಗಳ ಮೂಲಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕಿದೆ: ಮಾಜಿ ಮೇಯರ್ ಕೆ. ಅಶ್ರಫ್

Prasthutha|

ಮಂಗಳೂರು: ಗಾಸಿಪ್’ಗಳನ್ನು ಪ್ರಚಾರಪಡಿಸಿ ಕುಕ್ಕರ್ ಬಾಂಬ್’ಗಳನ್ನೂ ಮೀರುವ ಆತಂಕದ ಸ್ಥಿತಿ ನಿರ್ಮಾಣದ ಸುದ್ದಿ ಸ್ಫೋಟ ನಡೆಯುತ್ತಿದ್ದು, ಇಂತಹ ಗಾಸಿಪ್’ಗಳ ಮೂಲಗಳನ್ನು ಜನರೇ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕಿದೆ ಎಂದು ಮಾಜಿ ಮೇಯರ್, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಹೇಳಿದ್ದಾರೆ.

- Advertisement -

 ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹ ಗಾಸಿಪ್ ಸ್ಫೋಟದ ಮೂಲಕ ಜಿಲ್ಲೆಯ ಮತ್ತು ರಾಜ್ಯದ ನೈಜ ಸಮಸ್ಯೆಯನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಲು ಪ್ರಯತ್ನಿಸಲಾಗಿದೆ. ಇದರ ಫಲಿತಾಂಶದ ಗತಿಯನ್ನು ಅರಿಯಲು ಕಾಯಬೇಕಿದೆ, ಈ ಪ್ರಯತ್ನದ ಹಿಂದೆ ವೈದಿಕ ಶ್ರಮದ ವಾಸನೆ ಬಡಿಯುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಈ ಮಧ್ಯೆ ಜಿಲ್ಲೆಯ, ರಾಜ್ಯದ ಮಾಧ್ಯಮಗಳು ಈ ಘಟನೆಗೆ ಸಂಬಂಧಿಸಿ ವ್ಯತ್ಯಯ ಮತ್ತು ತರಾವರಿ ಸುದ್ದಿಗಳನ್ನು ಪ್ರಕಟಿಸಿ, ಇಡೀ ಜಿಲ್ಲೆಯ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ವಂಸಕ ಕೃತ್ಯದ ಷಡ್ಯಂತ್ರ ಉದ್ದೇಶಿಸಲಾಗಿತ್ತು, ನಗರದ ಪ್ರಮುಖ ಆರಾಧನಾ ಕೇಂದ್ರವೂ ಕೂಡಾ ಸ್ಫೋಟದ ಉದ್ದೇಶಿತ ಗುರಿಯಾಗಿತ್ತು ಎಂದು ಬಿಂಬಿಸುತ್ತಿದ್ದಾರೆ. ಇತ್ತೀಚೆಗೆ ನಗರದಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟದ ಘಟನೆಯ ಸುದ್ದಿಯ ನಂತರ ಸರಕಾರದ ಉನ್ನತ ಅಧಿಕಾರಿಗಳು ವಿಧಿ ವಿಜ್ಞಾನ ಇಲಾಖೆಯ ಪ್ರಾಥಮಿಕ ವರದಿಗಿಂತ ವೇಗವಾಗಿ, ಘಟನೆಗೆ ಸಂಬಂಧಿಸಿ ಜನರಲ್ಲಿ ಆತಂಕ ಮೂಡಿಸುವ ಅದೆಷ್ಟೋ ಹೇಳಿಕೆಗಳನ್ನು ನೀಡಿದ ಒಂದು ವಾರದ ನಂತರ ನಗರದ ಉನ್ನತ ಪೊಲೀಸ್ ಅಧಿಕಾರಿಗಳು ಆರೋಪಿಯ ತನಿಖೆ ಇನ್ನಷ್ಟೇ ಆಗಬೇಕಿದೆ ಎಂದು ಹೇಳಿದ್ದಾರೆ.

Join Whatsapp