ಬೈಕ್ ಮುಟ್ಟಿದ್ದಕ್ಕೆ ಕೋಣೆಯೊಳಗೆ ಕೂಡಿಹಾಕಿ ಕಬ್ಬಿಣದ ರಾಡ್ ನಿಂದ ಥಳಿಸಿದ ಶಿಕ್ಷಕ

Prasthutha|

ಉತ್ತರ ಪ್ರದೇಶ: 6 ನೇ ತರಗತಿಯ ದಲಿತ ವಿದ್ಯಾರ್ಥಿಯೋರ್ವ  ತನ್ನ ಬೈಕ್ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕನೊಬ್ಬ ತರಗತಿ ಕೋಣೆಯೊಳಗೆ ಕೂಡಿ ಹಾಕಿ ಕಬ್ಬಿಣದ ರಾಡ್ ನಿಂದ ವಿದ್ಯಾರ್ಥಿಗೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಪ್ರದೇಶದಲ್ಲಿ ನಡೆದಿದೆ.

- Advertisement -

ವಿದ್ಯಾರ್ಥಿಯೊಂದಿಗೆ ಕ್ರೂರತೆ ಮೆರೆದ ಶಿಕ್ಷಕ ಕೃಷ್ಣ ಮೋಹನ್ ಶರ್ಮಾ ಎಂದು ಗುರುತಿಸಲಾಗಿದ್ದು, ರಾನೌಪುರದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಈತನನ್ನು ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಮಣಿರಾಮ್ ಸಿಂಗ್ ತಿಳಿಸಿದ್ದಾರೆ.

ದಲಿತ ಬಾಲಕ ಕೃಷ್ಣನ ಬೈಕ್ ಅನ್ನು ಮುಟ್ಟಿದ್ದಕ್ಕೆ ಕೋಪಗೊಂಡ ಆತ, ವಿದ್ಯಾರ್ಥಿಯನ್ನು ತರಗತಿ ಕೋಣೆಗೆ ಕರೆತಂದು ಬಾಗಿಲಿಗೆ ಬೀಗ ಹಾಕಿ, ಕಬ್ಬಿಣದ ರಾಡ್ ನಿಂದ ಥಳಿಸಿದ್ದಾನೆ. ಈ ಸಂಬಂಧ ತನಗೆ ಕಬ್ಬಿಣದ ರಾಡ್ ಮತ್ತು ಪೊರಕೆಯಿಂದ ಹೊಡೆದಿದ್ದಾನೆ. ಕುತ್ತಿಗೆಯ ಭಾಗಕ್ಕೆ ಜೋರಾಗಿ ಪೆಟ್ಟು ಬಿದ್ದಿದೆ ಎಂದು ಮಗು ಹೇಳಿದ್ದು, ಶಾಲೆಯ ಇತರ ಸಿಬ್ಬಂದಿಗಳ ಸಹಾಯದಿಂದ ನನ್ನನ್ನು ರಕ್ಷಿಸಿದರು ಎಂದು ತಿಳಿಸಿದ್ದಾನೆ.

- Advertisement -

ನಾಗ್ರಾ ಪೊಲೀಸರು ಪ್ರಕರಣ ದಾಖಲಿಸಿದ್ದು , ನಾಗ್ರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ದೇವೇಂದ್ರ ನಾಥ್ ದುಬೆ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

Join Whatsapp