ಉತ್ತರಪ್ರದೇಶ | ರಾಷ್ಟ್ರಧ್ವಜ ಸುಟ್ಟ ವ್ಯಕ್ತಿಯ ಬಂಧನ;ವೀಡಿಯೋ ವೈರಲ್

Prasthutha|

ರಾಯ್ ಬರೇಲಿ: ದೇವಾಲಯದ ಆವರಣದಲ್ಲಿ ನಿಂತು ಯುವಕನೊಬ್ಬ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜಹದೀಶ್ ಪುರ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು 27 ವರ್ಷದ ನರೇಂದ್ರ ಸೈನಿ ಎಂದು ಗುರುತಿಸಲಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಕ್ಕೆ ಐಪಿಸಿ ಸೆಕ್ಷನ್ 7ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

- Advertisement -

ಉದ್ಯೋಗವನ್ನು ಪಡೆಯಲು ಸಾಧ್ಯವಾಗದೆ ಮತ್ತು ಅಧ್ಯಯನದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸದ ಕಾರಣ ಹತಾಶರಾದ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ಕ್ರಿಮಿನಲ್ ದಾಖಲೆಗಳು ಕಂಡುಬಂದಿಲ್ಲ. ಅವರು ಯಾವುದೇ ರಾಜಕೀಯ ಸಂಘಟನೆಯ ಸಿದ್ಧಾಂತಕ್ಕೆ ಬದ್ಧರಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.

Join Whatsapp