ಉಪ್ಪಿನಂಗಡಿ: ಹಿಂದೂ ಯುವಕನ ಜೀವ ರಕ್ಷಿಸಿದ ಮುಸ್ಲಿಂ ಯುವಕರು !

Prasthutha|

ಉಪ್ಪಿನಂಗಡಿ: ನದಿಗೆ ಹಾರಲು ಯತ್ನಿಸುತ್ತಿದ್ದ ಹಿಂದು ಯುವಕನನ್ನು ಮುಸ್ಲಿಂ ಯುವಕರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಉಪ್ಪಿನಂಗಡಿ ಬಳಿ ನಡೆದಿದೆ.

- Advertisement -


ಪುತ್ತೂರು ಕೊಡಿಪ್ಪಾಡಿ ನಿವಾಸಿ ನಾಗೇಶ (23) ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದನು, ಇದನ್ನು ಗಮನಿಸಿದ ಫಯಾಝ್, ರಶೀದ್, ಇಕ್ಬಾಲ್ ಸೇತುವೆಯ ಬಳಿ ಬಂದಿದ್ದಾರೆ.


ಸ್ವಲ್ಪಸಮಸಯದ ಬಳಿಕ ಯುವಕ ಸೇತುವೆ ಮೇಲಿಂದ ಹಾರಲು ಪ್ರಯತ್ನಿಸಿದ್ದು, ಈ ವೇಳೆ ಯುವಕನನ್ನು ರಕ್ಷಿಸಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದವನ ಕೈಯಲ್ಲಿ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿತ್ತು. ಬಳಿಕ ಪೊಲೀಸರು ಆತನ ಮನವೊಲಿಸಿ ಮನೆಯವರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp