ದೇಶಕ್ಕೆ ಬೇಕಿದ್ದಿದ್ದು ವಿಜ್ಞಾನ, ಆದರೆ ಬಿಜೆಪಿ ಹರಡಿದ್ದು ಅಜ್ಞಾನ : ಕಾಂಗ್ರೆಸ್ ಕಿಡಿ

Prasthutha|

ದೇಶಕ್ಕೆ ಬೇಕಿದ್ದಿದ್ದು ವಿಜ್ಞಾನ, ಆದರೆ ಬಿಜೆಪಿ ಹರಡಿದ್ದು ಅಜ್ಞಾನ ಎಂದು ಕಾಂಗ್ರೆಸ್ ಕುಟುಕಿದೆ.
ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಟೀಕಾಪ್ರಹಾರ ನಡೆಸಿದೆ.

- Advertisement -


ಕಳೆದ 70 ವರ್ಷದಿಂದ ಜನರಲ್ಲಿ ವೈಜ್ಞಾನಿಕ ಮನೋಭಾವದ ಜಾಗೃತಿ ಮೂಡಿಸಿಕೊಂಡು ಬಂದಿದ್ದನ್ನು ಬಿಜೆಪಿ ವ್ಯವಸ್ಥಿತವಾಗಿ ಹಾಳುಗೆಡವಿದೆ. ಲಸಿಕೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಬದಲು ಮೌಢ್ಯ ಬಿತ್ತಿದ್ದೇ ಬಿಜೆಪಿ. #VaccineVirodhiBJP ಎಂಬ ಹ್ಯಾಷ್ ಟ್ಯಾಗ್ ಬಳಸಿ ಟೀಕಿಸಿದೆ.


ಇತ್ತೀಚೆಗೆ ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು 100 ಎಂಎಲ್ ನೀರಿನೊಂದಿಗೆ 50ಎಂಎಲ್ ಗೋಮೂತ್ರ ಬೆರೆಸಿ ಕುಡಿದರೆ ಕೊರೋನಾ ಗುಣಮುಖವಾಗುತ್ತದೆ ಎಂದು ಹೇಳಿದ್ದರು. ಅವರ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಬಿಜೆಪಿ ಅವರ ಹೇಳಿಕೆಗೆ ಯಾವುದೇ ಖಂಡನೆ ವ್ಯಕ್ತಪಡಿಸದೆ ಮೌನವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಟ್ವೀಟ್ ಮೂಲಕ ತಿರುಗೇಟು ನೀಡಿದೆ.

Join Whatsapp