ವಿದೇಶಗಳ ಯುದ್ಧಗಳನ್ನು ನಿಲ್ಲಿಸುವ ಮೋದಿಗೆ ಮಹದಾಯಿ ಯೋಜನೆ ಜಾರಿಗೆ ತರಲು ಆಗಿಲ್ಲ: ಸಂತೋಷ್ ಲಾಡ್

Prasthutha|

ಧಾರವಾಡ: ಪ್ರಹ್ಲಾದ್‌ ಜೋಶಿ ನನಗೆ ಟಕ್ಕರ್‌ ಕೊಡುವ ನೆಪದಲ್ಲಿ ಸೋನಿಯಾ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ಮೋಸ್ಟ್‌ ಪಾವರ್ ಫುಲ್ ಮನುಷ್ಯ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳ ಯುದ್ಧಗಳನ್ನು ನಿಲ್ಲಿಸುತ್ತಾರಂತೆ. ಆದರೆ ಮಹದಾಯಿ ಯೋಜನೆ ಜಾರಿಗೆ ತರಲು ಆಗಿಲ್ಲ ಸಚಿವ ಸಂತೋಷ್ ಲಾಡ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು, ದೇಶದ ಸಾಲ ಅಭಿವೃದ್ಧಿಗೆ ಆಗಿದೆ ಅಂತಾರೆ. 1947 ರಿಂದ 2014 ರವರೆಗೆ 55 ಲಕ್ಷ ಕೋಟಿ ಸಾಲ ಆಗಿದೆ. ಅಭಿವೃದ್ಧಿಗೆ ಸಾಲ ಆಗಿದೆ ಅಂತಾರೆ. 70 ವರ್ಷದಲ್ಲಾದ ಅಭಿವೃದ್ಧಿ 10 ವರ್ಷದಲ್ಲಿ ಮಾಡಿದ್ದಾರಾ? 16 ಲಕ್ಷ ಕೋಟಿ ಉದ್ಯಮಿದಾರರ ಸಾಲ ಮನ್ನಾ ಆಗಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಕನ್ನಡದ ವಿರೋಧಿ ಏಕನಾಥ್ ಶಿಂಧೆ ಅವರನ್ನ ಪ್ರಚಾರಕ್ಕೆ ಕರೆಸಿದ್ದಾರೆ. ಮಹದಾಯಿ ನೀರು ಕೊಡಲು ಆಗ್ತಿಲ್ಲ ಮಹಾರಾಷ್ಟ್ರ ಸಿಎಂಗೆ. ಕನ್ನಡಿಗರಿಗೆ ಬಿಜೆಪಿ ಅವರು ಅವಮಾನ ಮಾಡುತ್ತಿದ್ದಾರೆ. ಏಕೆ ಅವರನ್ನು ಧಾರವಾಡಕ್ಕೆ ಪ್ರಚಾರಕ್ಕೆ ಕರೆಸಿದ್ದಾರೆ? ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

- Advertisement -


Join Whatsapp