ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಆಂಧ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗೆ ಚಪ್ಪಲಿ ಎಸೆತ!

Prasthutha|

ಹೈದರಾಬಾದ್ : ಆಂಧ್ರ ಪ್ರದೇಶದ ತೆಲುಗು ಸುದ್ದಿ ವಾಹಿನಿಯೊಂದರ ನೇರ ಪ್ರಸಾರದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿಗೆ, ಚರ್ಚೆಯಲ್ಲಿ ಪಾಲ್ಗೊಂಡಿದ್ದವರೊಬ್ಬರು ಚಪ್ಪಲಿ ಎಸೆದ ಘಟನೆ ನಡೆದಿದೆ.

- Advertisement -

ಅಮರಾವತಿ ಪರಿರಕ್ಷಣಾ ಸಮಿತಿ ಜಂಟಿ ಕ್ರಿಯಾ ಸಮಿತಿ ಸದಸ್ಯ ಕೆ. ಶ್ರೀನಿವಾಸ್ ರಾವ್ ಹಾಗೂ ರೆಡ್ಡಿ ಈ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚರ್ಚೆಯ ನಡುವೆ ಶ್ರೀನಿವಾಸ್ ರಾವ್ ಅವರಿಗೆ ಟಿಡಿಪಿ ನಂಟಿದೆ ಎಂದು ರೆಡ್ಡಿ ಆಪಾದಿಸಿದ್ದರು. ಈ ವಿಷಯ ಜಗಳಕ್ಕೆ ಕಾರಣವಾಯಿತು. ರಾವ್ ಅವರನ್ನು ಹಂಗಿಸುವುದು ರೆಡ್ಡಿ ಮುಂದುವರಿಸಿದಾಗ, ಸಿಟ್ಟುಗೊಂಡ ರಾವ್, ರೆಡ್ಡಿ ಮೇಲೆ ಚಪ್ಪಲಿ ತೆಗೆದು ಥಳಿಸಲು ಮುಂದಾಗಿ, ಕೊನೆಗೆ ಎಸೆದರು.

ಈ ಹಂತದಲ್ಲಿ ಅನಿವಾರ್ಯವಾಗಿ ಟಿವಿ ವಾಹಿನಿ ಬ್ರೇಕ್ ತೆಗೆದುಕೊಳ್ಳಬೇಕಾಯಿತು. ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿಗರ ಉದ್ಧಟತನದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Join Whatsapp