ಎಂದೂ ತುಟಿಬಿಚ್ಚದವರು, ಏಕಾಏಕಿ ಒಂದೇ ಸ್ವರದಲ್ಲಿ ಮಾತನಾಡಿದರೆ, ಅದೇ ನಿಜವಾದ ‘ಪ್ರೊಪಗಾಂಡ’ : ನಟ ಸಿದ್ಧಾರ್ಥ

Prasthutha|

- Advertisement -

ಚೆನ್ನೈ: ಕೇಂದ್ರ ಸರ್ಕಾರವನ್ನು ಬೆಂಬಲಿಸಿದ ಸೆಲೆಬ್ರಿಟಿಗಳನ್ನು  ತಮಿಳು ನಟ ಸಿದ್ಧಾರ್ಥ್ ತೀವ್ರ ಟೀಕೆ ಮಾಡಿದ್ದಾರೆ. ಎಂದಿಗೂ ಮಾತನಾಡದರು ಇದ್ದಕ್ಕಿದ್ದಂತೆ ಹಾಡುವುದು ನಿಜವಾದ ಪ್ರೊಪಗಂಡ ಎಂದು ಅವರು ಟ್ವೀಟ್ ಮಾಡಿದ್ದಾರೆ. ರೈತರ ಹೋರಾಟದ ಹೆಸರಿನಲ್ಲಿ ದೇಶದ ಸೆಲೆಬ್ರಿಟಿಗಳಲ್ಲಿ ಧ್ರುವೀಕರಣ ನಡೆಯುತ್ತಿದೆ. ರೈತರ ಹೋರಾಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ ಪಾಪ್ ತಾರೆ ರಿಹಾನ್ನಾ ಮತ್ತು ಪರಿಸರ ಕಾರ್ಯಕರ್ತೆ ಗ್ರೆಟಾ ತನ್ಬರ್ಗ್ ಅವರ ಪ್ರತಿಕ್ರಿಯೆಗಳ ನಂತರ ರೈತರ ಹೋರಾಟವು ಜಾಗತಿಕವಾಗಿ ಗಮನ ಸೆಳೆದಿತ್ತು. ದೇಶದ ಪ್ರಮುಖ ಕ್ರೀಡಾ ಮತ್ತು ಚಲನಚಿತ್ರ ತಾರೆಯರು ಇದರ ವಿರುದ್ಧ ಟ್ವೀಟ್ ಮಾಡಿದ್ದರು.

ಕ್ರೀಡಾ ಕ್ಷೇತ್ರದಿಂದ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಶಿಖರ್ ಧವನ್, ಆರ್.ಪಿ.ಸಿಂಗ್, ಅನಿಲ್ ಕುಂಬ್ಳೆ, ಗೌತಮ್ ಗಂಭೀರ್, ಪಿ.ಟಿ.ಉಷಾ. ಸಿನಿಮಾ ಕ್ಷೇತ್ರದಿಂದ ಕಂಗನಾ ರನೌತ್, ಅಕ್ಷಯ್ ಕುಮಾರ್, ಅಜಯ್ ದೇವ್‌ಗನ್, ಸುನಿಲ್ ಶೆಟ್ಟಿ ಮತ್ತು ಕರಣ್ ಜೋಹರ್ ಅವರನ್ನೊಳಗೊಂಡ ಸೆಲೆಬ್ರಿಟಿಗಳು ಕೇಂದ್ರ ಸರಕಾರವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಆದರೆ ಇದಕ್ಕೆಲ್ಲಾ ವ್ಯತಿರಿಕ್ತವಾಗಿ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ. ಎಂದಿಗೂ ಮಾತನಾಡದ ಸೆಲೆಬ್ರಿಟಿಗಳೆಲ್ಲರೂ ಒಂದೇ ಹಾಡನ್ನು ಯೋಜಿತ ಪ್ರಯತ್ನದಲ್ಲಿ ಹಾಡಿ ಅದನ್ನು ಬೆಂಬಲಿಸುವಂತೆ ಕೇಳಿಕೊಳ್ಳುವುದು ನಿಜವಾದ ಪ್ರೊಪಗಂಡ ಎಂದು ಅವರು ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರದ ರಕ್ಷಣೆಗೆ ಮುಂದಾಗಿರುವ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ .

Join Whatsapp