ಬೆಳುವಾಯಿಯ ರೋಶನ್ ರಾಮಚಂದ್ರ ಹೆಗಡೆ ಕುವೈಟ್ ನಲ್ಲಿ ನಿಧನ; ಮಾನವೀಯತೆ ಮೆರೆದ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್

Prasthutha|

ಕುವೈಟ್ ಸಿಟಿ: ಹಲವಾರು ವರ್ಷಗಳಿಂದ ಕುವೈಟ್ ನಲ್ಲಿ ದುಡಿಯುತ್ತಿದ್ದ ಬೆಳುವಾಯಿಯ ರೋಶನ್ ರಾಮಚಂದ್ರ ಹೆಗಡೆ  ಎಂಬವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

- Advertisement -

ಮೃತದೇಹವನ್ನು ಊರಿಗೆ ಕಳಿಸುವ ಪ್ರಯತ್ನವನ್ನು ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ನ ಮ್ಯಾಗ್ನೆಟ್ ತಂಡವು ಮಾಡುತಿದ್ದು ಅದಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದೆ.

ಬುಧವಾರ ಮೃತದೇಹ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಮ್ಯಾಗ್ನೆಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

- Advertisement -

ಈಗಾಗಲೇ ಭಾರತದ ಅನಿವಾಸಿ ಸಂಘಟನೆ ಕೆ.ಕೆ.ಎಂ.ಎ  ಮ್ಯಾಗ್ನೆಟ್ ತಂಡವು  ಜಾತಿ ಮತ ನೋಡದೆ ಈ ರೀತಿಯ ಹಲವಾರು ಮೃತದೇಹಗಳನ್ನು ಊರಿಗೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.

Join Whatsapp