ಕಾಫಿನಾಡಲ್ಲಿ ಮುಂದುವರಿದ ಪ್ರಾಕೃತಿಕ ವಿಕೋಪ

Prasthutha|

ಚಿಕ್ಕಮಗಳೂರು : ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಂಟಾಗಿದ್ದು ಭಾರೀ ಮಳೆಗೆ ಕಾಂಕ್ರೀಟ್ ರಸ್ತೆ ಬಾಯ್ತೆರೆದುಕೊಂಡಿದೆ.

- Advertisement -

ಇದು ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಪ್ರವಾಸಿ ತಾಣ ಹೆಬ್ಬೆ ಮತ್ತು ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ರಸ್ತೆಯ ಎಡಬದಿಯಲ್ಲಿ ಸುಮಾರು ಮೂರು ಅಡಿ ಭೂಮಿ ಕುಸಿದಿದೆ.  ಕ್ಷಣ-ಕ್ಷಣಕ್ಕೂ ಬಿರುಕು ಬಿಟ್ಟು ರಸ್ತೆ ಕುಸಿಯುತ್ತಿದ್ದು, ಪ್ರವಾಸಿಗರಿಗೆ ಜೀವ ಭಯವುಂಟಾಗಿದೆ.

ಪ್ರಸ್ತುತ ಸ್ಥಳದ ಬಗ್ಗೆ  ಅಧಿಕಾರಿಗಳು ಯಾವುದೇ  ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ     ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Join Whatsapp