ರಾಜ್ಯಸಭಾ ಚುನಾವಣೆಯಿಂದ ನಾಮಪತ್ರ ಹಿಂಪಡೆದ ಸಂಸದ

Prasthutha|

ಮುಂಬೈ : ರಾಜ್ಯಸಭಾ ಸಂಸದ ಸಂಭಾಜಿ ರಾಜೆ ಅವರು ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

- Advertisement -

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕುದುರೆ ವ್ಯಾಪಾರವನ್ನು ತಪ್ಪಿಸಲು ನಾನು ನನ್ನ ನಾಮಪತ್ರವನ್ನು ಹಿಂಪಡೆದಿದ್ದೇನೆ. ನಾನು ಶಿವಾಜಿ ಮಹಾರಾಜರ ವಂಶಸ್ಥನಾಗಿದ್ದೇನೆ ಮತ್ತು ನನಗೂ ನನ್ನದೇ ಆದ ಘನತೆಯಿದೆ‌. ನಾನು ಮಹಾರಾಷ್ಟ್ರದಲ್ಲಿ ಸ್ವರಾಜ್ಯ ಸಂಘಟನೆಯನ್ನು ಬಲಪಡಿಸುತ್ತೇನೆ” ಎಂದು  ಹೇಳಿದರು.

ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಿಗದಿಯಾಗಿದ್ದು, ಮೇ 31 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

Join Whatsapp