ಮಾವು ಕೀಳಿದ್ದ ಅಪ್ರಾಪ್ತ ದಲಿತ ಬಾಲಕನಿಗೆ ಮಾರಣಾಂತಿಕ ಹಲ್ಲೆ

Prasthutha|

ಮುಂಬೈ: ಮಾವಿನ ಹಣ್ಣು ಕೀಳಿದ್ದಕ್ಕಾಗಿ ಅಪ್ರಾಪ್ತ ದಲಿತ ಬಾಲಕನಿಗೆ ಅಮಾನುಷವಾಗಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ನಲ್ಲಿ ವರದಿಯಾಗಿದೆ.

- Advertisement -

ಬಾಲಕನನ್ನು ಮರಕ್ಕೆ ಕಟ್ಟಿಹಾಕಿ ಕ್ರೂರವಾಗಿ ಥಳಿಸಿ, ದೇಹದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ಮಾತ್ರವಲ್ಲದೆ ಆರೋಪಿಗಳು ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂತ್ರಸ್ತ ಮತ್ತು ಆತನ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.ತೋಟದ ಮಾಲೀಕ ರವೀಂದ್ರ ಪಾಟೀಲ್ ಮತ್ತು ಆತನ ಸ್ನೇಹಿತ ಪ್ರವೀಣ ಪಾವ್ರಾಯ ಬಂಧಿತರು.

ಮಾವು ಕೀಳಿದ್ದ ಬಾಲಕನನ್ನು ಹಿಡಿದು ಪ್ರವೀಣ್ ಪಾವ್ರಾಯ ಹಿಡಿದು ಕೃಷಿ ಮಾಲೀಕ ರವೀಂದ್ರ ಪಾಟೀಲನಿಗೆ ಒಪ್ಪಿಸಿದ್ದು, ನಂತರ ಇಬ್ಬರೂ ಬಾಲಕನನ್ನು ಮರಕ್ಕೆ ಕಟ್ಟಿಹಾಕಿ ಕ್ರೂರವಾಗಿ ಥಳಿಸಿ ನಿಂದಿಸಿ ಆತನ ದೇಹದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ.

Join Whatsapp