ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ : ಜೆಡಿಎಸ್ ವಾಗ್ದಾಳಿ

Prasthutha|

ಬೆಂಗಳೂರು: ಕೈ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯ ಘಟಕ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದು, ಸತ್ಯಕ್ಕೆ ಸಮಾಧಿ ಕಟ್ಟುವುದು ಕೈ ಸರ್ಕಾರದ ಚಾಳಿ, ಅದು ಮೂಲತ: ಸುಳ್ಳುಗಳ ವಾಚಾಳಿ , ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು  ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ , ಹಂಗಿದೆ ನೋಡಿ ಕಮೀಷನ್ ಕಾಂಗ್ರೆಸ್ ನ ಹೊಸ ವರಸೆ, ಹೊಸ ಕಸವರಿಕೆ ಎಂದು ವಾಗ್ದಾಳಿ ನಡೆಸಿದೆ.   

- Advertisement -

ಮಾಜಿ ಸಿಎಂ ಹೆಚ್ ಡಿಕುಮಾರಸ್ವಾಮಿ ವೈ ಎಸ್​ ಟಿ ತೆರಿಗೆ ಬಗ್ಗೆ ಹೇಳಿ, ಕಾಸಿಗಾಗಿ ಹುದ್ದೇ ದಂಧೆಯನ್ನು ದಾಖಲೆ ಸಮೇತ ಬಿಚ್ಚಿಟ್ಟರೂ  ಆ ಅಸಹ್ಯ  ತನ್ನದಲ್ಲ ಎನ್ನುವ ಅವಿವೇಕ ಕೈ ಪಕ್ಷದ್ದು ಆ ಅವಿವೇಕವನ್ನು ಮುಚ್ಚಿಕೊಳ್ಳಲು ವೆಸ್ಟ್ ಆಂಡ್ ಹೋಟೆಲ್ ಎಂಬ ವಿಷಯ ನೆನಪಿಸಿದೆ ಎಂದು ಕಿಡಿಕಾರಿದೆ.

ವೆಸ್ಟ್ ಎಂಟ್ ಬಾಡಿಗೆ ಮಾತಿರಲಿ, ಲುಲು ವಿಚಾರಕ್ಕೆ ಬರೋಣ,  ಹೊಲ ಉತ್ತಿ ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ ತೆಗೆದ ಫಸಲಿಗೆ ಲುಲು ಮಾಡಬಹುದಾ ? ಒಂದುವೇಳೆ ಮಾಡೋದಾದ್ರೆ ಲುಲುಕುಮಾರ್ ಗಿಂತ ಬೆಸ್ಟ್ ಎಕನಾಮಿಸ್ಟ್ ಇನ್ನೊಬ್ಬರಿಲ್ಲ, ಹಾಗಿದ್ರೆ ಅವರನ್ನೇ ವಿತ್ತ ಮಂತ್ರಿ ಮಾಡಬೋದಿತ್ತಲ್ಲ ಎಂದು ಜೆಡಿಎಸ್ ಪ್ರಶ್ನಿಸಿದೆ.

- Advertisement -

ಕೈ ಸರ್ಕಾರ ತಾಜ್ ವೆಸ್ಟ್ ಎಂಡ್ ಹೊಟೆಲ್ ವಿಚಾರವಾಗಿ ಟೀಕಿಸಿದ್ದು, ಇದೀಗ ಜೆಡಿಎಸ್ ತಿರುಗೇಟು ನೀಡಿದೆ. ವೆಸ್ಟ್ ಎಂಡ್ ಲೆಕ್ಕ ಇರಲಿ, ಸಿಎಂ ಟಿಪ್ಪಣಿ ಬಿಕರಿಗೆ ಲೆಕ್ಕ ಇಡಿ, ಬೂಟಾಟಿಕೆ ದಾಸಯ್ಯನಿಗೆ ಮೈಯೆಲ್ಲ ಪಂಗನಾಮ ಎಂದು ಜೆಡಿಎಸ್ ಕಿಡಿಕಾರಿದೆ.

Join Whatsapp