ಯತಿ ನರಸಿಂಹಾನಂದನ ಸಮಾವೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ

Prasthutha|

ಲಕ್ನೋ: ಹರ್ದಿವಾರ್ ನಲ್ಲಿ ನಡೆದ ಮೂರು ದಿನಗಳ ಯತಿ ನರಸಿಂಹಾನಂದನ ಸಮಾವೇಶದಲ್ಲಿ ಮುಸ್ಲಿಮರು ಮತ್ತು ಅವರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಲು ಸಂಘಪರಿವಾರದ ನಾಯಕರು ಕರೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

- Advertisement -

ಹಿಂದುತ್ವದ ಮೂರು ದಿನಗಳ ಸಮಾವೇಶದಲ್ಲಿ ಸಂಘಪರಿವಾರ ವಿವಿಧ ನಾಯಕರು ಮುಸ್ಲಿಮರ ವಿರುದ್ಧ ಬಹಿರಂಗವಾಗಿ ಹಿಂಸೆಗೆ ಪ್ರಚೋದಿಸುತ್ತಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.

ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ನಿರಂಜಿನಿ ಅಖಾಡ ಮಹಾಮಂಡಳೇಶ್ವರ ಅನ್ನಪೂರ್ಣ ಮಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಮುಸ್ಲಿಮರ ವಿರುದ್ಧ ಹಿಂಸಾತ್ಮಕ ದಂಗೆಗೆ ಕರೆ ನೀಡಿದ್ದಾಳೆ.

- Advertisement -

ಮತ್ತೋರ್ವ ಹಿಂದುತ್ವ ಪ್ರಚಾರಕ ಸಾಗರ್ ಸಿಂಧುರಾಜ್, “5000 ರೂಪಾಯಿಯ ಮೊಬೈಲ್ ಇದ್ದರೂ ಪರವಾಗಿಲ್ಲ. ಆದರೆ ಕನಿಷ್ಠ ಒಂದು ಲಕ್ಷ ಮೌಲ್ಯದ ಆಯುಧವನ್ನು ಹೊಂದಿರಲೇಬೇಕು ಎಂದು ನಾನು ಪದೇ ಪದೇ ಹೇಳುತ್ತಲೇ ಇರುತ್ತೇನೆ. ಯಾರಾದರೂ ಮನೆಗೆ ಬಂದರೆ ಅವರು ಜೀವಂತವಾಗಿ ಹಿಂತಿರುಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಯಾವಾಗಲೂ ಮನೆಯಲ್ಲಿ ಆಯುಧವನ್ನು ಹೊಂದಿರಿ” ಎಂದು ಪ್ರಚೋದಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸಿದೆ.

Join Whatsapp