ಗೋಲ್ಡನ್ ಬ್ಯಾರಿಸ್ ಬಹರೈನ್ ವತಿಯಿಂದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ: ಕನ್ನಡ ರಾಜ್ಯೋತ್ಸವ ಟ್ರೋಫಿ

Prasthutha|

ಬಹರೈನ್ : ಗೋಲ್ಡನ್ ಬ್ಯಾರಿಸ್ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಗುರುವಾರ ಬಹರೈನ್ ನ ಬೂರಿ ಕ್ರೀಡಾಂಗಣದಲ್ಲಿ ನಡೆದಿದೆ.

- Advertisement -

ಲೀಗ್ ಹಾಗೂ ನಾಕೌಟ್ ಮಾದರಿಯ ಶೈಲಿಯಲ್ಲಿ ಕ್ರಿಕೆಟ್ ಪಂದ್ಯಾಕೂಟ ನಡೆದಿದ್ದು, 14 ತಂಡಗಳು ಭಾಗವಹಿಸಿತ್ತು. ಬಹರೈನ್ ಬ್ರದರ್ಸ್ ತಂಡ ಜಯಗಳಿಸಿ ತನ್ನ ಮೊದಲನೆಯ ಸ್ಥಾನವನ್ನು ತಮ್ಮಮಡಿಲಿಗೆ ಏರಿಸಿ ಕೊಂಡಿದ್ದು, ದ್ವಿತೀಯ ಸ್ಥಾನವನ್ನು ಅಶೇಶ್ ಬಹರೈನ್ ತಂಡ ಪಡೆದುಕೊಂಡಿದೆ.

ಉತ್ತಮ ಎಸೆತಗಾರನಾಗಿ ನೌಶಾದ್ ಬಹರೈನ್ ಬ್ರದರ್ಸ್, ಉತ್ತಮ ಹೊಡೆತ ಗಾರನಾಗಿ ನೌಫಾಲ್ ಬಹರೈನ್ ಬ್ರದರ್ಸ್, ಮ್ಯಾನ್ ಆಫ್ ದ ಮಾಚ್ ಸಫ್ವನ್ ಬಹರೈನ್ ಬ್ರದರ್ಸ್, ಪ್ಲೇಯರ್ ಆಫ್ ದ ಟೂರ್ನಮೆಂಟ್ ಈಜಾಝ್ ಆಶೇಶ್ ಬಹರೈನ್ ಹಾಗೂ ಎಮರ್ಜಿಂಗ್ ಪ್ಲೇಯರ್ ಜೆಕ್ಕಿ ಆಶೆಶ್ ಬಹರೈನ್ ತಂಡದ ಕ್ರೀಡಾಪಟು ಗಳು ಆಯ್ಕೆಯಾಗಿದ್ದಾರೆ.

- Advertisement -

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಝೀಝ್ ಕೋಟ, ಶರತ್ ತನ್ಯ, ಇರ್ಫಾನ್ ನಾಜುಕ್, ಫರಾಝ್ ಸುಳ್ಯ, ಹಫೀಲ್ ಪರ್ಲಿಯ , ನಿಹನ್ ಉಪ್ಪಳ ಮತ್ತಿತರ ಅತಿಥಿಗಳು ಬಾಗಿಯಾಗಿದ್ದು, ಕಾರ್ಯಕ್ರಮದ ಸಮಾರೋಪ ಸಮಾರಂಭದ ನಿರೂಪಣೆಯನ್ನು ಅಶ್ರಫ್ ಸೀಮಾಶ್ ನಡೆಸಿಕೊಟ್ಟರು.

Join Whatsapp