ಸಂಸದ ರಮೇಶ ಜಿಗಜಿಣಗಿ ಮಾಜಿ ಕಾರು ಚಾಲಕನ ಬರ್ಬರ ಹತ್ಯೆ

Prasthutha|

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರ ಮಾಜಿ ಕಾರು ಚಾಲಕನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ‌ ಇಲ್ಲಿನ ಆದರ್ಶನಗರದಲ್ಲಿ ನಡೆದಿದೆ.

- Advertisement -

ಆದರ್ಶನಗರದ ಆಲಕುಂಟೆ ನಗರದಲ್ಲಿ ಜಾಡರ ಓಣಿಯ ಮಲ್ಲಿಕಾರ್ಜುನ ದೊಡಮನಿ (43) ಕೊಲೆಯಾದವರು.

ಸಂಸದ ರಮೇಶ ಜಿಗಣಜಿಗಿ ಬಳಿ ಕಾರು ಚಾಲಕನಾಗಿದ್ದ ಮಲ್ಲಿಕಾರ್ಜುನ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟು ಆಟೋ ಚಲಾಯಿಸಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಕೆಲಸ ಮಾಡುತ್ತಿರಲಿಲ್ಲ. ನಿನ್ನೆ ರಾತ್ರಿ ತನ್ನ ಅಕ್ಕ ಶಾಂತವ್ವ ಅವರನ್ನು ಆಕೆಯ ಮನೆಗೆ ಬಿಡಲು ಹೋಗಿದ್ದರು. ಅಲ್ಲಿಂದ ಹಿಂದೆ ಬರುತ್ತಿದ್ದಾಗ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

- Advertisement -

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಹಣಕಾಸಿನ ವ್ಯವಹಾರದಿಂದ ಹತ್ಯೆ ಆಗಿರಬಹುದೆಂದು ಕುಟುಂಬದವರು ಶಂಕಿಸಿದ್ದಾರೆ‌. ಆದರ್ಶ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp