“ನನ್ನ ಭದ್ರತೆಗೆ ನೇಮಿಸಿದ ಪೊಲೀಸರ ಮೇಲೆ ವಿಶ್ವಾಸವಿಲ್ಲ, ನನ್ನನ್ನು ಶೂಟ್ ಮಾಡಬಹುದು” : ಎಸ್ಪಿ ಶಾಸಕ ಅಬ್ದುಲ್ಲಾ ಅಝಂ ಖಾನ್ ಆತಂಕ

Prasthutha|

ಲಕ್ನೋ: ತನ್ನ ಭದ್ರತೆಗೆ ನೇಮಿಸಿದ ಪೊಲೀಸರನ್ನು ನಂಬುವಂತಿಲ್ಲ ಮತ್ತು ನನ್ನನ್ನೇ ಗುಂಡಿಕ್ಕಿ ಹತ್ಯೆ ನಡೆಸಬಹುದೆಂದು ಆತಂಕವನ್ನುಶಾಸಕ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಬ್ದುಲ್ಲಾ ಅಝಂ ಖಾನ್ ವ್ಯಕ್ತಪಡಿಸಿದ್ದಾರೆ.

- Advertisement -

ರಾಮ್ ಪುರದ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್ ನಲ್ಲಿ ಸ್ಪರ್ಧಿಸಿರುವ ಅಬ್ದುಲ್ಲಾ ಅಝಂ ಖಾನ್ ಈ ಕುರಿತು ಪ್ರತಿಕ್ರಿಯಿಸುತ್ತಾ, ನನ್ನ ಭದ್ರತೆಗೆ ನೇಮಿಸಲ್ಪಟ್ಟ ಪೊಲೀಸರೇ ಶೂಟ್ ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ಹಲವು ಅಧಿಕಾರಿಗಳು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಒಬ್ಬಂಟಿಯಾಗಿದ್ದೇನೆ. ನನ್ನ ಜೊತೆ ಯಾರೂ ಕೂಡ ಇಲ್ಲ. ಭದ್ರತೆಗಾಗಿ ನನ್ನ ಜೊತೆಗಿರುವ ಪೊಲೀಸರ ಮೇಲೆಯೇ ನಂಬಿಕೆ ಇಲ್ಲ. ಪೊಲೀಸರು ನನ್ನನ್ನು ಗುಂಡು ಹಾರಿಸಿ ಕೊಲ್ಲಬಹುದು ಎಂಬ ಗಂಭೀರ ಆರೋಪ ಹೊರಿಸಿದ್ದಾರೆ.

- Advertisement -

ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದಿಂದ ಸಂಸದ ಅಝಂ ಖಾನ್ ಅವರನ್ನು ರಾಮ್ ಪುರ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಪ್ರಸಕ್ತ ಸಂಸದ ಅಝಂ ಖಾನ್ ವಿರುದ್ಧ ಭೂಕಬಳಿಕೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದಾರೆ.

Join Whatsapp