ಮಹಿಳೆ ಆತ್ಮಹತ್ಯೆಗೆ ಮತಾಂತರದ ಬಣ್ಣ ಹಚ್ಚಿದ ಉಡುಪಿ ‘ದಿಗ್ವಿಜಯ ನ್ಯೂಸ್’ ಪತ್ರಕರ್ತ : ಪ್ರಕರಣ ದಾಖಲು

Prasthutha|

►ಈ ಪತ್ರಕರ್ತ ಉಡುಪಿ ಹಿಂದೂ ಜಾಗರಣಾ ವೇದಿಕೆಯ ನಾಯಕ !

- Advertisement -

ಮಣಿಪಾಲ : ಉಡುಪಿಯ ಮಹಿಳೆಯೋರ್ವರ ಆತ್ಮಹತ್ಯೆಯನ್ನು ಮತಾಂತರವೆಂದು ಕೋಮು ಬಣ್ಣ ಹಚ್ಚಿ ಅಶಾಂತಿ ಹರಡಲು ಪ್ರಯತ್ನಿಸಿದ್ದ ‘ದಿಗ್ವಿಜಯ್ ನ್ಯೂಸ್’ ಚಾನೆಲಿನ ಉಡುಪಿ ವರದಿಗಾರ ಶ್ರೀಕಾಂತ್ ಎಂಬವನ ವಿರುದ್ಧ ಪೊಲೀಸರು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  

ಉಡುಪಿ ಜಿಲ್ಲೆಯ ಬಡಗಬೆಟ್ಟುವಿನಲ್ಲಿ ವಾಸವಿರುವ ವೆಂಕಟೇಶ್ ಎಂಬವರ ಪತ್ನಿ ಜಯಲಕ್ಷ್ಮಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಡಿಸಂಬರ್ 6 ರಂದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ.

- Advertisement -

ಆದರೆ ಈ ಆತ್ಮಹತ್ಯೆಯನ್ನು ‘ದಿಗ್ವಿಜಯ್ ನ್ಯೂಸ್’ ನ ಉಡುಪಿ ವರದಿಗಾರ ಅದನ್ನು ಮತಾಂತರ ಎಂದು ಬಿಂಬಿಸಿ ಡಿಸಂಬರ್ 7 ರಂದು ‘ದಿಗ್ವಿಜಯ್ ನ್ಯೂಸ್’ ಚಾನೆಲಿನಲ್ಲಿ ವಿಶೇಷ ವರದಿ ಪ್ರಸಾರವಾಗುವಂತೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮೃತ ಜಯಲಕ್ಷ್ಮಿಯ ಪತಿ ವೆಂಕಟೇಶ್ ಅವರೇ ಪೊಲೀಸ್ ದೂರು ನೀಡಿದ್ದು, ಅದರಂತೆ ಮಣಿಪಾಲ ಠಾಣೆಯಲ್ಲಿ ಆರೋಪಿ ವರದಿಗಾರ ಶ್ರೀಕಾಂತನ ವಿರುದ್ಧ ಅಪರಾಧ ಕ್ರಮಾಂಕ 164/2021,  ಐಪಿಸಿ ಕಲಂ 3(1)(u) ಎಸ್ಸಿ/ಎಸ್ಟಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

‘ದಿಗ್ವಿಜಯ್ ನ್ಯೂಸ್’ನ ಉಡುಪಿ ವರದಿಗಾರ ಉಡುಪಿ ಹಿಂದೂ ಜಾಗರಣಾ ವೇದಿಕೆಯ ಮುಖಂಡನೂ ಆಗಿದ್ದು, ಸಭೆಗಳಲ್ಲಿ ಪ್ರಚೋದನಕಾರಿ ಭಾಷಣಗಳಿಗೆ ಕುಖ್ಯಾತಿ ಹೊಂದಿದ್ದಾನೆ.  

Join Whatsapp