ಮಂಗಳೂರಿನಲ್ಲಿ ಮತ್ತೆ ಸಂಘಪರಿವಾರದ ಅನೈತಿಕ ಗೂಂಡಾಗಿರಿ: ಸಹಪಾಠಿಯೊಂದಿಗೆ ಬಸ್ಸಿನಲ್ಲಿದ್ದ ಮುಸ್ಲಿಮ್ ವಿದ್ಯಾರ್ಥಿಯ ಮೇಲೆ ತೀವ್ರ ಹಲ್ಲೆ !

Prasthutha|

ಮಂಗಳೂರು ನಗರದ ಹೃದಯ ಭಾಗದ ಸಿಟಿ ಬಸ್ ನಿಲ್ದಾಣದಲ್ಲೇ ಘಟನೆ !

- Advertisement -

ಮಂಗಳೂರು: ನಗರದ ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಖಾಸಗಿ ಬಸ್ ನಿಲ್ದಾಣದ ಬಳಿ ಮಂಗಳೂರಿನಿಂದ ಉಡುಪಿಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ಸಹಪಾಠಿಗಳಿಗೆ ಸಂಘಪರಿವಾರದವರು ಹಿಡಿದು ಥಳಿಸಿದ ಘಟನೆ  ಇಂದು ನಡೆದಿದೆ.


ಯುವಕ ಶಿವಮೊಗ್ಗ ಮೂಲದವನಾಗಿದ್ದು,  ಯುವತಿ ಉಡುಪಿಯವರು ಎಂದು ಗುರುತಿಸಲಾಗಿದೆ. ಇಬ್ಬರು ಮಂಗಳೂರಿನ ವಾಮಂಜೂರಿನ ಖಾಸಗಿ ಕಾಲೇಜೊಂದರಲ್ಲಿ ಸಹಪಾಠಿಗಳಾಗಿದ್ದು, ಇಬ್ಬರು ಉಡುಪಿಗೆ ತೆರಳುವ ಬಸ್ಸಿನಲ್ಲಿ ಕುಳಿತಿದ್ದರು. ಇದನ್ನು ಗಮನಿಸಿ ಬಸ್ಸಿನ ಒಳಗೆ ಬಂದ ಸಂಘಪರಿವಾರಕ್ಕೆ ಸೇರಿದ ಬಸ್ ನಿರ್ವಾಹಕ ಮತ್ತು ಇತರ ಕಾರ್ಯಕರ್ತರು ಯುವಕ ಮೇಲೆ ಹಲ್ಲೆ ನಡೆಸಿ ವಿದ್ಯಾರ್ಥಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅವಮಾನೀಯವಾಗಿ ವರ್ತಿಸಿದ್ದಾರೆ.  ಯುವಕನ ಐಡಿ ಹಾಗೂ ವಿಳಾಸವನ್ನು ಕೇಳಿ ಧಮ್ಕಿ ಹಾಕುವ ವೀಡಿಯೋ ವೈರಲ್ ಆಗಿದೆ.

Join Whatsapp