ಸೋಮವಾರದಿಂದ ಬೆಂಗಳೂರು – ಕಾರವಾರ ಹಗಲು ರೈಲು ಸಂಚಾರ ಪುನಾರಂಭ

Prasthutha|

ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಯಶವಂತಪುರ– ಕಾರವಾರ-ಯಶವಂತಪುರ ಹಗಲು ರೈಲು ಸಂಚಾರವನ್ನು ಆಗಸ್ಟ್ 16ರಿಂದ ಪುನಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

- Advertisement -


ಈ ಕುರಿತಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದು, ಕೊರೋನಾ ಕಾರಣದಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ರೈಲು ಸಂಚಾರವನ್ನು ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿತ್ತು. ಇದೀಗ ಆಗಸ್ಟ್ 16ರಿಂದ ರೈಲು ಸಂಚಾರಕ್ಕೆ ಅನುಮತಿಸಲಾಗಿದೆ ಎಂದರು.

ಈ ರೈಲು ಬೆಂಗಳೂರು-ಕಾರವಾರ ನಡುವೆ ವಾರದಲ್ಲಿ ಮೂರು ದಿನಗಳಲ್ಲಿ ಸಂಚರಿಸಲಿದೆ. 06211 ಸಂಖ್ಯೆಯ ರೈಲು ಸೋಮವಾರದಿಂದ ಹಾಗೂ 06212 ಸಂಖ್ಯೆಯ ರೈಲು ಮಂಗಳವಾರದಿಂದ ಆರಂಭಗೊಳ್ಳಲಿದೆ ಎಂದು ಇಲಾಖೆ ತಿಳಿಸಿದೆ.

Join Whatsapp